ಬೀದಿ ನಾಯಿ ದಾಳಿ: ಬಾಲಕ ಸೇರಿ ಇಬ್ಬರಿಗೆ ಗಾಯ

Update: 2019-05-03 17:09 GMT

ಮಂಡ್ಯ, ಮೇ 3: ನಗರದಲ್ಲಿ ಬೀದಿನಾಯಿ ದಾಳಿಗೆ ಬಾಲಕ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ನಾಝಿಯಾ-ಜಾಕೀರ್ ದಂಪತಿ ಪುತ್ರ ಮದೀಜಾ ನಾಜ್ ಮೇಲೆ ನಾಯಿಗಳು ದಾಳಿ ನಡೆಸಿದ್ದು, ಈ ವೇಳೆ ರಕ್ಷಣೆಗೆಂದು ಬಂದ ಖೈಸರ್ ಖಾನ್ ಮೇಲೂ ನಾಯಿ ದಾಳಿ ನಡೆಸಿವೆ.

ಖೈಸರ್ ಗಲ್ಲ, ಕತ್ತು, ಹೊಟ್ಟೆ ಸೇರಿದಂತೆ ದೇಹದ ಹಲವಾರು ಭಾಗಗಳನ್ನು ನಾಯಿ ಕಚ್ಚಿವೆ. ತಕ್ಷಣ ಜಾಗೃತರಾದ ಸಾರ್ವಜನಿಕರು ಬೀದಿ ನಾಯಿಗಳ ದಾಳಿಯಿಂದ ಇಬ್ಬರನ್ನು ರಕ್ಷಿಸಿ, ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ವಯಸ್ಕರ ಮೇಲೂ ದಾಳಿಗಳು ನಡೆಯುತ್ತಿದ್ದು, ನಗರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನಾದರೂ ಹೆಚ್ಚೆತ್ತು ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ನಗರಸಭಾ ಸದಸ್ಯ ನಯೀಂಖಾನ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News