ಮರಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು, ಮಗು ಸೇರಿ ಇಬ್ಬರಿಗೆ ಗಾಯ

Update: 2019-05-04 16:01 GMT

ಚಾಮರಾಜನಗರ: ಪ್ರವಾಸಿಗರ ಕಾರು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ, ಚಾಲಕ ಹಾಗೂ ಮಗುವಿಗೆ ಗಂಭೀರ ಗಾಯಗಳಾದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲೀಗೌಡನಹಳ್ಳಿ ಗೇಟ್ ಬಳಿ ನಡೆದಿದೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಆಂದ್ರಪ್ರದೇಶದ ಕೃಷ್ಣಗಿರಿ ಜಿಲ್ಲೆಯ ಕೋಯಿವಾಡಾ ಮೂಲದ ಮೋನಿಕಾ (24) ಮೃತ ಮಹಿಳೆ. ಆಕೆಯ ಪತಿ ಶ್ರೀಕಾಂತ್ ಹಾಗೂ ಒಂಭತ್ತು ತಿಂಗಳ ಮಗುವಿನೊಂದಿಗೆ ಊಟಿಯತ್ತ ತೆರಳುವಾಗ ಕಾರು ಮರಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಕೂಡಲೇ ಗ್ರಾಮಸ್ಥರು ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಘಟನೆ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News