ಮರದ ಕೊಂಬೆ ಬಿದ್ದು ಕೃಷಿ ಕಾರ್ಮಿಕ ಮೃತ್ಯು

Update: 2019-05-06 17:33 GMT

ಶೃಂಗೇರಿ, ಮೇ.6: ತಾಲೂಕಿನ ಬೇಗಾರು ಗ್ರಾ.ಪಂ ವ್ಯಾಪ್ತಿಯ ನಿಲಂದೂರು ಗ್ರಾಮದ ಕವಳಗೆರೆ ಶೃಂಗೇಶ್ವರ್ ಎಂಬವರ ತೋಟದಲ್ಲಿ ಸೋಮವಾರ ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಮರದ ಕೊಂಬೆ ಬಿದ್ದು ಮರ್ಕಲ್ ಗ್ರಾಪಂ ವ್ಯಾಪ್ತಿಯ ಕೋಗಿನಬೈಲಿನ ಚಂದ್ರಹಾಸ (41) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ. 

ಮೃತ ಕಾರ್ಮಿಕ ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಶೃಂಗೇರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸ್ವಾಂತನ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News