ವಿಜಯಪುರ: ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ; ಬಂದೂಕು, ಚಿನ್ನಾಭರಣ ಜಪ್ತಿ
Update: 2019-05-09 17:20 GMT
ವಿಜಯಪುರ, ಮೇ 9: ಝಳಕಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ರಮೇಶ ಮಾಳಿ, ಮೋದಿನಸಾಬ್ ವಾಲಿಕಾರ್ ಬಂಧಿತ ಕಳ್ಳರು. ಬಂಧಿತರಿಂದ ಎರಡು ಬಂದೂಕು ಹಾಗೂ 7 ಜೀವಂತ ಗುಂಡು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, 88 ಸಾವಿರ ಮೌಲ್ಯದ 184 ಗ್ರಾಂ ಬಂಗಾರ, 235 ಗ್ರಾಂ ಬೆಳ್ಳಿ ಆಭರಣ, ಒಂದು ಬೈಕ್ ಜಪ್ತಿ ಮಾಡಿದ್ದಾರೆ.
ಇವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಗಳು ಎಂದು ತಿಳಿದುಬಂದಿದೆ.