ವಿಜಯಪುರ: ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ; ಬಂದೂಕು, ಚಿನ್ನಾಭರಣ ಜಪ್ತಿ

Update: 2019-05-09 17:20 GMT

ವಿಜಯಪುರ, ಮೇ 9: ಝಳಕಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

ರಮೇಶ ಮಾಳಿ, ಮೋದಿನಸಾಬ್ ವಾಲಿಕಾರ್ ಬಂಧಿತ ಕಳ್ಳರು. ಬಂಧಿತರಿಂದ ಎರಡು ಬಂದೂಕು ಹಾಗೂ 7 ಜೀವಂತ ಗುಂಡು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, 88 ಸಾವಿರ ಮೌಲ್ಯದ 184 ಗ್ರಾಂ ಬಂಗಾರ, 235 ಗ್ರಾಂ ಬೆಳ್ಳಿ ಆಭರಣ, ಒಂದು ಬೈಕ್ ಜಪ್ತಿ ಮಾಡಿದ್ದಾರೆ.

ಇವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಗಳು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News