ಹನೂರು: ಕಾಡಾನೆಗಳಿಂದ ಜಮೀನಿಗೆ ದಾಳಿ; ತ್ವರಿತ ಕ್ರಮಕ್ಕೆ ರೈತರ ಆಗ್ರಹ

Update: 2019-05-09 17:26 GMT

ಹನೂರು, ಮೇ 9: ಹನೂರು ಸಮೀಪದ ಸಿಂಗನಲ್ಲೂರಿನ ಗ್ರಾಮದ ಕೆರೆಯ ಆಸುಪಾಸಿನ ಜಮೀನುಗಳಿಗೆ ಇತ್ತೀಚೆಗೆ ಕಾಡಾನೆಗಳು ಲಗ್ಗೆ ಇಡುತ್ತಿದ್ದು, ಆನೆಗಳ ದಾಳಿಯ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.

ಹನೂರು ಕ್ಷೇತ್ರ ವ್ಯಾಪ್ತಿಯ ಸಿಂಗನಲ್ಲೂರು ಗ್ರಾಮದ ನಾರಯಣಸ್ವಾಮಿ ಎಂಬವರ ಜಮೀನಿಗೆ ಬುಧವಾರ ತಡ ರಾತ್ರಿ ದಾಳಿ ಮಾಡಿದ ಆನೆಗಳು, ಬೆಳೆದಿದ್ದ ಬಾಳೆ ಫಸಲನ್ನು ನಾಶಪಡಿಸಿ ಹಾನಿಗೊಳಿಸಿದೆ.

ಆನೆಗಳು ಹಲವು ದಿನಗಳಿಂದಲೂ ಈ ಭಾಗದ ಜಮೀನುಗಳಿಗೆ ಲಗ್ಗೆ ಇಡುವುದು ಸರ್ವೆ ಸಾಮಾನ್ಯವಾಗಿದ್ದು, ರೈತರು ಬೆಳೆದ ಫಸಲುಗಳನ್ನು ನಾಶ ಮಾಡುತ್ತಿದೆ. ಇದರಿಂದ ಹಲವರು ನಷ್ಟಕ್ಕೆ ಒಳಗಾಗಿ ಕಂಗಾಲಾಗಿದ್ದು, ಕೂಡಲೇ ಅರಣ್ಯಾಧಿಕಾರಿಗಳು ಆನೆ ದಾಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಮತ್ತು ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News