ಜೀವನದಲ್ಲಿ ಜಿಗುಪ್ಸೆ: ದಂಪತಿ ನೇಣಿಗೆ ಶರಣು

Update: 2019-05-10 17:24 GMT

ಮಂಡ್ಯ, ಮೇ 10: ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಸಮೀಪದ ಮೆಳ್ಳಹಳ್ಳಿ ಗ್ರಾಮದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಂಪತಿ ನೇಣು ಬಿಗುದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ನಾಗರಾಜು(28) ಮತ್ತು ಮಂಜುಳ(24) ಎಂಬವರೇ ಸಾವನ್ನಪ್ಪಿರುವ ದಂಪತಿಗಳು. ಇವರು ಹುಣ್ಣನದೊಡ್ಡಿ ಮೂಗೇಗೌಡ ಅವರ ವಠಾರದಲ್ಲಿ ಬಾಡಿಗೆಗೆ ಇದ್ದರು.

ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ಅನ್ಯೋನ್ಯವಾಗಿದ್ದು, ಒಂದು ಗಂಡು ಮಗು ಇದೆ. ಮಂಜುಳ 5 ತಿಂಗಳ ಗರ್ಭಿಣಿಯಾಗಿದ್ದು, ನಾಗರಾಜು ಸ್ವಲ್ಪ ಸಾಲ ಮಾಡಿ ಕೊಂಡಿದ್ದರಿಂದ ಅದನ್ನು ತೀರಸಲಾಗದ ಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ.

ಬೆಳಗ್ಗೆ ಮನೆಯಲ್ಲೆ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಕೆ.ಎಂ.ದೊಡ್ಡಿ ಪೊಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News