ವಿಧವೆಗೆ ಮಗುವಾದ ಬಳಿಕ ಕೈಕೊಟ್ಟ ಯುವಕ: ವರದಕ್ಷಿಣೆ ಕಿರುಕುಳ ಆರೋಪ, ದೂರು ದಾಖಲು

Update: 2019-05-11 17:48 GMT

ಮಂಡ್ಯ, ಮೇ 11: ವಿಧವೆಯೋರ್ವಳನ್ನು ರಿಜಿಸ್ಟರ್ ವಿವಾಹ ಮಾಡಿಕೊಂಡಿದ್ದ ಯುವಕನೊಬ್ಬ ಮಗುವಾದ ಬಳಿಕ ಕೈಕೊಟ್ಟು ಪರಾರಿಯಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಕೋಡಿಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೋಡಿಮಾರನಹಳ್ಳಿ ಗ್ರಾಮದ ಕೆ.ಕೆ.ರೂಪಾ ಎಂಬ ವಿಧವೆಗೆ ಕಿಕ್ಕೇರಿ ಹೋಬಳಿ ಲಕ್ಷ್ಮೆಪುರ ಗ್ರಾಮದ ನಂಜೇಗೌಡರ ಮಗ ಎಲ್.ಎನ್.ಸವಿಕುಮಾರ್ ವಂಚಿಸಿದ ಯುವಕ. 16-12-2016ರಂದು ಹೊಳೆನರಸೀಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮದುವೆ ಮಾಡಿಕೊಂಡಿರುವ ಸವಿಕುಮಾರ್, ಸುಮಾರು ಎರಡೂವರೆ ವರ್ಷಗಳ ಕಾಲ ಸಂಸಾರ ನಡೆಸಿದ್ದಾರೆ. ಅಲ್ಲದೆ, 9 ತಿಂಗಳ ಹಿಂದೆ ಹೆಣ್ಣು ಮಗು ಸಹ ಹುಟ್ಟಿದೆ. ಈಗ ತಮ್ಮ ಪೋಷಕರ ಮಾತು ಕೇಳಿಕೊಂಡು ತನ್ನನ್ನು ಮತ್ತು ಮಗುವನ್ನು ದೂರ ಮಾಡಿದ್ದಾರೆ ಎಂದು ರೂಪಾ ಆರೋಪಿಸಿದ್ದಾರೆ. ಈ ಸಂಬಂಧ ಕಿಕ್ಕೇರಿ ಪೊಲೀಸರು ಸವಿಕುಮಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ತನಿಖೆ ಕೈಗೊಂಡಿದ್ದಾರೆ.

ಇದೇ ಮೇ 5ರಂದು ನಮ್ಮ ತಂದೆ ಮನೆ ಕೋಡಿಮಾರನಹಳ್ಳಿಯಲ್ಲಿ ಇರುವಾಗ ರಾತ್ರಿ 10 ಗಂಟೆಗೆ ಬಂದಿದ್ದ ನನ್ನ ಪತಿ 5 ಲಕ್ಷ ರೂ. ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾರೆ. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಸೂಕ್ತ ರಕ್ಷಣೆ ಕೊಡಿಸಬೇಕು.
-ರೂಪಾ, ಸವಿಕುಮಾರ್ ಹೆಂಡತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News