ಮಂಡ್ಯ: ಆಪ್ತ ಕಾರ್ಯದರ್ಶಿಯ ಔತಣಕೂಟದಲ್ಲಿ ಕುಮಾರಸ್ವಾಮಿ, ಪುತ್ರ ನಿಖಿಲ್ ಭಾಗಿ

Update: 2019-05-12 11:55 GMT

ಮಂಡ್ಯ, ಮೇ 12: ಮದ್ದೂರಿನ ಸೋಮನಹಳ್ಳಿ ಬಳಿ ನಡೆಯುತ್ತಿದ್ದ ತಮ್ಮ ಖಾಸಗಿ ಆಪ್ತ ಕಾರ್ಯದರ್ಶಿ ರಘು ಅವರ ವಿವಾಹದ ಬೀಗರ ಔತಣಕೂಟಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಭಾಗವಹಿಸಿ ವಧುವರರಿಗೆ ಶುಭಕೋರಿದರು.

ಪುತ್ರ ನಿಖಿಲ್ ಔತಣಕೂಟಕ್ಕೆ ಮೊದಲು ಆಗಮಿಸಿದರು. ಸ್ವಲ್ಪ ಸಮಯದ ನಂತರ ಮಡಿಕೇರಿ ಬಳಿ ರೆಸಾರ್ಟ್‍ನಲ್ಲಿ ವಾಸ್ತವ್ಯವಿದ್ದ ಸಿಎಂ ಕುಮಾರಸ್ವಾಮಿ ಅವರೂ ಆಗಮಿಸಿ ವಧುವರರನ್ನು ಆಶೀರ್ವದಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್, ಚುನಾವಣೆ ನಂತರ ತನ್ನ ತಂದೆ ಬಳಸುತ್ತಿದ್ದ ರೇಂಜ್ ರೋವರ್ ಕಪ್ಪುಬಣ್ಣದ ಕಾರನ್ನು ಬಳಸುತ್ತಿದ್ದು, ಅದೇ ಕಾರಿನಲ್ಲಿ ಔತಣಕೂಟಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಸುದ್ದಿಗಾರರಿಂದ ಅಂತರ ಕಾಯ್ದುಕೊಂಡ ಸಿಎಂ ಕುಮಾರಸ್ವಾಮಿ, ಮೇ 23ರ ನಂತರ ಮಾತನಾಡುತ್ತೇನೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News