ಪಾಂಡವಪುರ: 80 ಸಾವಿರ ರೂ. ಬೆಲೆಬಾಳುವ ಎರಡು ಹಸುಗಳನ್ನು ಕದ್ದೊಯ್ದ ಕಳ್ಳರು

Update: 2019-05-13 16:26 GMT

ಪಾಂಡವಪುರ, ಮೇ 13: ಮಧ್ಯರಾತ್ರಿ ತಮ್ಮ ಕೈಚಳಕ ತೋರಿಸಿರುವ ಕಳ್ಳರ ಗುಂಪೊಂದು ಪತ್ರಕರ್ತರೊಬ್ಬರ 80 ಸಾವಿರ ರೂ. ಬೆಲೆಬಾಳುವ ಎರಡು ಹಸುಗಳನ್ನು ಕದ್ದೊಯ್ದಿರುವ ಘಟನೆ ಪಟ್ಟಣದ ಹೊರವಲಯದಲ್ಲಿ ಶ್ರೀರಂಗಪಟ್ಟಣ-ಬೀದರ್ ಹೆದ್ದಾರಿ ಬಳಿ ನಡೆದಿದೆ.

ಪತ್ರಕರ್ತ ಹಾಗೂ ಬಿಎಸ್‍ಪಿ ಮುಖಂಡ ಕೆ.ಎನ್.ರವೀಂದ್ರಕುಮಾರ್ ಎಂಬವರೇ ತಮ್ಮ ಎರಡು ಇಲಾತಿ ಹಸುಗಳನ್ನು ಕಳೆದುಕೊಂಡವರಾಗಿದ್ದಾರೆ.

ಎಂದಿನಂತೆ ರವೀಂದ್ರಕುಮಾರ್ ಅವರು ತಮ್ಮ ಮನೆ ಮುಂದೆ ಹಸುಗಳನ್ನು ಕಟ್ಟಿದ್ದರು. ಈ ವೇಳೆ ಕಳ್ಳರು ಎರಡು ಹಸುಗಳನ್ನು ಕಳ್ಳತನ ಮಾಡಿ ಪರಾರಿಯಾಗುವ ಮೂಲಕ ತಮ್ಮ ಕೈಚಳಕ ತೋರಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಕಳೆದ ಹಲವಾರು ವರ್ಷಗಳಿಂದಲೂ ಕೆ.ಎನ್.ರವೀಂದ್ರಕುಮಾರ್ ಅವರು ಈ ಹಸುಗಳನ್ನೇ ನಂಬಿ ಬದುಕು ನಡೆಸುತ್ತಿದ್ದರು. ಇದೀಗ ಹಸುಗಳನ್ನು ಕಳೆದುಕೊಂಡಿರುವ ರವೀಂದ್ರಕುಮಾರ್ ಅವರ ಕುಟುಂಬದವರು ಸಂಕಷ್ಟಕ್ಕೀಡಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News