ಚನ್ನಗಿರಿ: ವಿದ್ಯುತ್ ತಂತಿ ತಗುಲಿ ರೈತ ಸಾವು

Update: 2019-05-13 18:01 GMT

ದಾವಣಗೆರೆ, ಮೇ 13: ತೋಟಕ್ಕೆ ನೀರು ಸಾಗಿಸಲು ಭದ್ರಾ ಕಾಲುವೆಯಿಂದ ಟ್ಯಾಂಕರ್ ಗೆ ನೀರು ತುಂಬಿಸುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ರೈತರೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಸಮೀಪ ಸೋಮವಾರ ಬೆಳಗ್ಗೆ ಸಂಭವಿಸಿದೆ.

ಚನ್ನಗಿರಿ ತಾಲೂಕಿನ ಮಲ್ಲಿಗೆರೆ ಗ್ರಾಮದ ರಘು ನಾಯ್ಕ(30) ಮೃತ ರೈತ. ತೋಟಕ್ಕೆ ನೀರು ಹಾಯಿಸಲು ಭದ್ರಾ ಕಾಲುವೆಯಿಂದ ಟ್ಯಾಂಕರ್ ಗೆ ನೀರು ತುಂಬಿಸಲೆಂದು ಟ್ಯಾಂಕರ್ ಮೇಲೆ ರಘು ನಾಯ್ಕ ನಿಂತಿದ್ದಾಗ ನಾಲೆ ಸಮೀಪವೇ ಹಾದು ಹೋಗಿರುವ ವಿದ್ಯುತ್ ತಂತಿ ಆಕಸ್ಮಿಕವಾಗಿ ಅವರಿಗೆ ತಗುಲಿ, ಟ್ಯಾಂಕರ್ ಮೇಲೆಯೇ ರಘುನಾಯ್ಕ ಸಾವನ್ನಪ್ಪಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News