ಬಿಎಸ್ವೈಗೆ ಬಸವಣ್ಣನ ತತ್ವಗಳ ಅರಿವಿಲ್ಲ: ದಿನೇಶ್ ಗುಂಡೂರಾವ್
Update: 2019-05-15 16:20 GMT
ಬೆಂಗಳೂರು, ಮೇ 15: ಆರೆಸ್ಸೆಸ್ನಂತಹ ಕೋಮುವಾದಿಗಳ ಜೊತೆಯಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಸವಣ್ಣನ ತತ್ವಗಳ ಬಗ್ಗೆ ಅರಿವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದರು.
ಲಿಂಗಾಯತರು ಕಾಂಗ್ರೆಸ್ಗೆ ಮತ ಹಾಕಿದರೆ ಅಪರಾಧ ಮಾಡಿದಂತೆ ಎಂದು ಯಡಿಯೂರಪ್ಪ ನೀಡಿರುವ ವಿವಾದಿತ ಹೇಳಿಕೆ ಖಂಡಿಸಿ ಬುಧವಾರ ತಮ್ಮ ಟ್ವಿಟರ್ನಲ್ಲಿ ಹೇಳಿರುವ ದಿನೇಶ್ ಗುಂಡೂರಾವ್, ಎಲ್ಲ ಧರ್ಮವನ್ನು ಸಮಾನವಾಗಿ ಗೌರವಿಸುವುದು ಬಸವ ತತ್ವವಾಗಿದೆ ಎಂದರು.
ಕೋಮುವಾದಿಗಳ ಜೊತೆಯಲ್ಲಿರುವ ಯಡಿಯೂರಪ್ಪಅವರಿಗೆ ಬಸವ ತತ್ವಗಳ ಬಗ್ಗೆ ಅರಿವಿಲ್ಲ. ಹಾಗಾಗಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಬಸವಣ್ಣನವರು ನುಡಿದಂತೆ ನಡೆಯುವ ತತ್ವಕ್ಕೆ ಬದ್ಧವಾಗಿದೆ ಎಂದು ದಿನೇಶ್ ನುಡಿದರು.