ಈಶ್ವರಚಂದ್ರ ವಿದ್ಯಾಸಾಗರ್ ಪ್ರತಿಮೆ ಧ್ವಂಸ...

Update: 2019-05-15 18:17 GMT

ಕೋಲ್ಕತಾದಲ್ಲಿ ಹಿಂಸಾಚಾರದ ಸಂದರ್ಭ ಸಾಮಾಜಿಕ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರರ ಪ್ರತಿಮೆ ಧ್ವಂಸ ಮಾಡಿದ ಕುರಿತಂತೆ ಬಿಜೆಪಿಯ ವಿರುದ್ಧದ ವಾಗ್ದಾಳಿಯನ್ನು ಬುಧವಾರ ತೀವ್ರಗೊಳಿಸಿರುವ ತೃಣಮೂಲ ಪಕ್ಷ, ಪ್ರತಿಮೆಯನ್ನು ಬಿಜೆಪಿಯ ಗೂಂಡಾಗಳು ಧ್ವಂಸ ಮಾಡಿದ್ದಾರೆ ಎಂಬುದನ್ನು ಪ್ರತಿಪಾದಿಸುವ ವೀಡಿಯೊ ಬಿಡುಗಡೆ ಮಾಡಿದೆ. ಈ ಘಟನೆ ಕುರಿತು ಡೆರಿಕ್ ಒಬ್ರಿಯಾನ್, ಸುಖ್‌ದೇವ್ ಶೇಖರ್ ರಾಯ್, ಮನೀಶ್ ಗುಪ್ತಾ, ನದೀಮುಲ್ ಹಕ್ ಅವರನ್ನು ಒಳಗೊಂಡ ತೃಣಮೂಲ ಪಕ್ಷದ ಸಂಸದೀಯ ತಂಡ ಚುನಾವಣಾ ಆಯೋಗವನ್ನು ಭೇಟಿಯಾಗಿ ತಮ್ಮ ಪ್ರತಿಪಾದನೆ ಬೆಂಬಲಿಸುವ ಪುರಾವೆಗಳನ್ನು ನೀಡಿತು. ಈಶ್ವರ ಚಂದ್ರ ವಿದ್ಯಾಸಾಗರ್ ಅವರ ಭಗ್ನಗೊಂಡಿರುವ ಪ್ರತಿಮೆಯನ್ನು ಪ.ಬಂ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor