ಸೋಮವಾರಪೇಟೆ: ಐಷರ್ ವಾಹನ ಉರುಳಿ ಕಾರ್ಮಿಕ ಸಾವು

Update: 2019-05-18 12:04 GMT

ಸೋಮವಾರಪೇಟೆ: ಬ್ರೇಕ್ ವಿಫಲಗೊಂಡು ಐಷರ್ ವಾಹನ ಉರುಳಿಬಿದ್ದ ಪರಿಣಾಮ, ವಾಹನದೊಳಗಿದ್ದ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಸಮೀಪದ ಹೊಸಬೀಡು ಗ್ರಾಮದಲ್ಲಿ ನಡೆದಿದೆ.

ಕೂಡಿಗೆ ನಿವಾಸಿ ಮಹದೇವ್ (48) ಮೃತಪಟ್ಟವರು. ಹೊಸಬೀಡು ಗ್ರಾಮದ ಯಶ್ವಂತ್ ಅವರಿಗೆ ಸೇರಿದ ತೋಟದಲ್ಲಿ ಹೋಂ ಸ್ಟೇ ನಿರ್ಮಾಣಗೊಳ್ಳುತ್ತಿದ್ದು, ಕೂಡಿಗೆಯ ರಘು ಎಂಬವರಿಗೆ ಕಾಂಕ್ರೀಟ್ ಗುತ್ತಿಗೆ ನೀಡಲಾಗಿತ್ತು. ಅದರಂತೆ ಇಂದು ಬೆಳಿಗ್ಗೆ ಐಷರ್ ವಾಹನದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರ ಸಹಿತ ತೆರಳುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.

ಇಳಿಜಾರು ಪ್ರದೇಶದಲ್ಲಿ ವಾಹನದ ಬ್ರೇಕ್ ವಿಫಲಗೊಂಡು ರಸ್ತೆಯ ಬದಿಗೆ ಉರುಳಿ ಬಿದ್ದಿದ್ದು, ಈ ಸಂದರ್ಭ ವಾಹನದ ಒಳಗಿದ್ದ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರ ಮಹದೇವ್ ಅವರ ಮೇಲೆ ಬಿದ್ದಿದ್ದು, ತೀವ್ರ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಾಹನದ ಚಾಲಕ ರಮೇಶ್, ವಾಹನದೊಳಗಿದ್ದ ಇತರ ಕಾರ್ಮಿಕರಾದ ನಾಗರಾಜ್, ಮಹೇಶ್ ಅವರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ತೆರಳಿ ಪರಿಶೀಲನೆ ನಡೆಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News