ಓ ಮೆಣಸೇ…

Update: 2019-05-19 18:30 GMT

ಆನೆ (ಸಿದ್ದರಾಮಯ್ಯ) ದಾರಿಯಲ್ಲಿ ನಡೆದುಕೊಂಡು ಹೋಗುವಾಗ ನಾಯಿಗಳು ಬೊಗಳುತ್ತಿರುತ್ತವೆ - ಎಸ್.ಟಿ.ಸೋಮಶೇಖರ್, ಶಾಸಕ
  ಆನೆಯ ದಂತವನ್ನು ಮುರಿದು ಮಾರಿದವರ ಕುರಿತಂತೆ ತನಿಖೆ ನಡೆಯುತ್ತಿದೆ.

---------------------

ಪ್ರಧಾನಿ ಮೋದಿ ಖಾಸಗಿ ಜೀವನದ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡಿರುವ ಮಾಯಾವತಿ ಕ್ಷಮೆ ಯಾಚಿಸಬೆಕು - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಅಂತಹದೊಂದು ಕೆಟ್ಟ ಜೀವನ ನಡೆಸಿದ್ದಕ್ಕೆ ಮೋದಿ ಕ್ಷಮೆ ಯಾಚಿಸಬೇಡವೇ?

---------------------

ಮುಸ್ಲಿಮರ ಐಸಿಎಸ್‌ನಂತೆ ಹಿಂದೂಗಳ ಆರೆಸ್ಸೆಸ್ - ಕೆ.ಎಸ್.ಅಳಗಿರಿ, ತಮಿಳುನಾಡು, ಕಾಂಗ್ರೆಸ್ ಅಧ್ಯಕ್ಷ
 
ಆರೆಸ್ಸೆಸ್ ನಕಲಿ ಹಿಂದೂಗಳದ್ದು, ಐಸಿಸ್ ನಕಲಿ ಮುಸ್ಲಿಮರದ್ದು. ಮುಸ್ಲಿಮರು ಮತ್ತು ಹಿಂದೂಗಳು ಇವುಗಳ ನಡುವೆ ಅಂತರ ಕಾಯಬೇಕು.

---------------------

ನನಗೆ ಯಾರ ಚಮಚಾಗಿರಿ ಮಾಡಿಯೂ ಅಭ್ಯಾಸವಿಲ್ಲ - ಝಮೀರ್ ಅಹ್ಮದ್, ಸಚಿವ
ನಿಮ್ಮದು ಚಮಚಾ ಅಲ್ಲ, ಸೌಟು.

---------------------

ಮೇ 23ರವರೆಗೆ ಯಾರು ಏನೇ ಹೇಳಿದರೂ ಅದು ವ್ಯರ್ಥ - ಜಿ.ಟಿ.ದೇವೇಗೌಡ, ಸಚಿವ
ಆಮೇಲೆ ನೀವು ಹೇಳುವುದೆಲ್ಲ ವ್ಯರ್ಥ.

---------------------
ಮಾಜಿ ಸಿಎಂ ಸಿದ್ದರಾಮಯ್ಯರ ಆಶೀರ್ವಾದ ಇರುವವರೆಗೆ ಮೈತ್ರಿ ಸರಕಾರ ಇರುತ್ತದೆ - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಪಾದಕ್ಕೆ ಬಿದ್ದರೆ ಆಶೀರ್ವಾದ ಮಾಡಲು ಸಿದ್ಧ ಎನ್ನುತ್ತಿದ್ದಾರೆ.

---------------------

ಕಾಂಗ್ರೆಸ್ - ಜೆಡಿಎಸ್‌ನದು ಒತ್ತಾಯದ ವಿಧುರ - ವಿಧವೆಯ ಮದುವೆ - ಬಸವನಗೌಡ ಪಾಟೀಲ್ ಯತ್ನಾಳ್, ಶಾಸಕ
ಬಿಜೆಪಿಯ ಲಿವಿಂಗ್ ಟುಗೆದರ್‌ಗಿಂತ ವಾಸಿ.

---------------------

ಟವೆಲ್ ಹಾಕಿ ರಾಜ್ಯಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಬಿಜೆಪಿ ರೈಲು ಅಥವಾ ಬಸ್ ಅಲ್ಲ - ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವ
ಕರ್ನಾಟಕದಲ್ಲಿ ಅದೀಗ ಮುರಿದು ಬಿದ್ದ ಎತ್ತಿನ ಬಂಡಿ.

---------------------

ನಾಥೂರಾಂ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ - ಕಮಲ್‌ಹಾಸನ್, ನಟ
ಹಾಗಾದರೆ ಹಿಂದೂ ಮಹಾಸಭಾ, ಭಾರತದ ಐಸಿಸ್ ಎಂದಾಯಿತು.

---------------------
ಬಿಎಸ್ಪಿ ಆನೆಯ ಬಲ ತಾಳಲಾಗದೆ ಎಸ್ಪಿ ಸೈಕಲ್ ಪಂಕ್ಚರಾಗಲಿದೆ - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಆಮ್ಲಜನಕ ಸಿಲಿಂಡರ್ ಇಲ್ಲದೆ ಸತ್ತ ಮಕ್ಕಳ ಕಣ್ಣೀರು ನಿಮ್ಮನ್ನು ಶಾಶ್ವತ ಕಾಡಿಗೆ ಕಳುಹಿಸಲಿದೆ.

---------------------

ಸಾಧಕರಿಗೆ ಟೀಕೆಗಳು ಬರುವುದು ಸಹಜ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ನಿಮ್ಮಂತಹ ಸಮಯ ಸಾಧಕರಿಗೂ 

---------------------

ದೇವೇಗೌಡರು ಪ್ರಧಾನಿಯಾಗಿ ಮುಂದುವರಿದಿದ್ದರೆ ಕಾಶ್ಮೀರ ಸಮಸ್ಯೆ ಕೂಡಾ ಬಗೆಹರಿಯುತ್ತಿತ್ತು - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರಮಠ
ಮೋದಿ ಪ್ರಧಾನಿಯಾಗಿ ಸಮಸ್ಯೆ ಬಿಗಡಾಯಿಸಿತು ಎಂದು ಹೇಳುತ್ತಿದ್ದೀರಿ.

---------------------

ಬೆಳವಣಿಗೆಯ ಒಂದು ಹಂತದವರೆಗೆ ಮನುಷ್ಯನಿಗೆ ಅಹಂಕಾರ ಅಗತ್ಯವಿದೆ - ರವಿಶಂಕರ್‌ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಅಹಂಕಾರವನ್ನು ತ್ಯಜಿಸಲು ಮೋದಿಗೆ ಸೂಚನೆ.

---------------------
ಪ್ರಾದೇಶಿಕ ಪಕ್ಷಗಳಿಲ್ಲದೆ ಯಾವುದೇ ರಾಷ್ಟ್ರೀಯ ಪಕ್ಷಕ್ಕೂ ಕೇಂದ್ರದಲ್ಲಿ ಸರಕಾರ ರಚಿಸಲು ಸಾಧ್ಯವಿಲ್ಲ - ದೇವೇಗೌಡ, ಮಾಜಿ ಪ್ರಧಾನಿ
ಪ್ರಧಾನಿ ಹುದ್ದೆಯ ವಾಸನೆ ಬಡಿದಿರಬೇಕು.

---------------------

ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ - ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ನಿಮ್ಮ ಮಾತು ಯಡಿಯೂರಪ್ಪರೊಳಗೆ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ.

---------------------
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥರನ್ನು ಮುಗಿಸಲು ಮಾಜಿ ಪ್ರಧಾನಿ ದೇವೇಗೌಡ ಹುನ್ನಾರ ನಡೆಸಿದ್ದಾರೆ - ಎ.ಮಂಜು, ಮಾಜಿ ಸಚಿವ
ಜೆಡಿಎಸ್‌ನ್ನು ಮುಗಿಸುವುದಕ್ಕೆ ಅವರ ಮೊದಲ ಆದ್ಯತೆಯಂತೆ.

---------------------

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಆರೆಸ್ಸೆಸ್ ಮೂಗು ತೂರಿಸದು - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ

ಬಹುಶಃ ಬಾಲವನ್ನಷ್ಟೇ ತೂರಿಸುವ ಉದ್ದೇಶವಿರಬೇಕು.

---------------------

ಕಾಂಗ್ರೆಸ್‌ನಲ್ಲಿ ಪ್ರಧಾನಿಯ ಮಗ ಪ್ರಧಾನಿ - ನಿತಿನ್ ಗಡ್ಕರಿ, ಕೇಂದ್ರ ಸಚಿವ

ಆರೆಸ್ಸೆಸ್‌ನಲ್ಲಿ ಬ್ರಾಹ್ಮಣನ ಮಕ್ಕಳೇ ಸಂಚಾಲಕರಾದಂತೆ.

---------------------
ರಾಜ್ಯದಲ್ಲಿ ಮೈತ್ರಿ ಸರಕಾರಕ್ಕೆ ಆಯುಷ್ಯವಿದೆ ಎಂದು ಯಾರಿಗೂ ಅನಿಸುತ್ತಿಲ್ಲ - ಸಿ.ಟಿ.ರವಿ, ಶಾಸಕ
ಮತ್ತೆ ರಾತ್ರಿ ಕಾರು ಚಲಾಯಿಸುವ ಸಿದ್ಧತೆಯಲ್ಲಿರುವಂತಿದೆ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...