ದಾವಣಗೆರೆ: ವಿದ್ಯಾರ್ಥಿ ಸಾವು ಪ್ರಕರಣ; ಕಾಲೇಜ್ ಆಡಳಿತ ಮಂಡಳಿ ವಿರುದ್ಧ ಪೋಷಕರ ಪ್ರತಿಭಟನೆ

Update: 2019-05-20 17:56 GMT

ದಾವಣಗೆರೆ, ಮೇ 20: ಆಡಳಿತ ಮಂಡಳಿ ನಿರ್ಲಕ್ಷ್ಯದ ಹಿನ್ನೆಲೆ ತಮ್ಮ ಪುತ್ರ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಮೃತ ವಿದ್ಯಾರ್ಥಿಯ ಪೋಷಕರು ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. 

ನಗರದ ಹೊರವಲಯದಲ್ಲಿರುವ ಜೈನ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಪ್ರತಿಭಟನೆ ನಡೆಸಿದ ಮೃತ ವಿದ್ಯಾರ್ಥಿ ಲಿಖಿತ್ (22) ಪೋಷಕರು ಮಗನ ಹೆಸರಿನಲ್ಲಿ ಕಾಲೇಜಿನ ಒಳಭಾಗದಲ್ಲಿ ಸ್ಮಾರಕ ಭವನ ಕಟ್ಟುವಂತೆ ಒತ್ತಾಯಿಸಿದರು. 

ಕಳೆದ ಮೇ 13 ರಂದು ಲಿಖಿತ್ ಕಾಲೇಜಿನ ಮೈದಾನದಲ್ಲಿ ಬೈಕಲ್ಲಿ ಹೋಗುವಾಗ ಹಗ್ಗ ಕುತ್ತಿಗೆಗೆ ಸಿಕ್ಕಿ ಹಾಕಿ ಸಾವನ್ನಪ್ಪಿದ್ದ. ತಮ್ಮ ಪುತ್ರ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿದ್ದು, ನಮ್ಮ ಪುತ್ರನಿಗೆ ತೊಂದರೆಯಾದಂತೆ ಯಾವ ಮಕ್ಕಳಿಗೂ ಈ ರೀತಿಯ ಅಪಾಯವಾಗಬಾರದು. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News