ಫಲಿತಾಂಶಕ್ಕೂ ಮುನ್ನವೇ ನಿಖಿಲ್ ಕುಮಾರಸ್ವಾಮಿ ಸಂಸದ !

Update: 2019-05-22 17:14 GMT

ಮಂಡ್ಯ, ಮೇ 22: ಒಂದೆಡೆ ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶ ದೇಶದಾದ್ಯಂತ ಕುತೂಹಲ ಕೆರಳಿಸಿದ್ದರೆ, ಮತ್ತೊಂದೆಡೆ ಫಲಿತಾಂಶಕ್ಕೂ ಮುನ್ನವೇ ಅಭಿಮಾನಿಯೊಬ್ಬರು ಮೈತ್ರಿ ಅಭ್ಯರ್ಥಿ ನಿಖಿಲ್ ಸಂಸದರೆಂದು ಮದುವೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಅಚ್ಚರಿ ಮೂಡಿಸಿದ್ದಾರೆ.

ಶ್ರೀರಂಗಪಟ್ಟಣ ತಾಲೂಕು ಮೇಳಾಪುರ ಗ್ರಾಮದ ಎಂ.ಎನ್.ಅಶೋಕ್‍ ಕುಮಾರ್ ಅವರು ಅಭಿಲಾಷ ಎಂಬವರ ಜತೆ ಜೂನ್ 9 ರಂದು ವಿವಾಹವಾಗುತ್ತಿದ್ದು, ತನ್ನ ಮದುವೆ ಆಹ್ವಾನ ಪತ್ರಿಕೆಯಲ್ಲಿ ನಿಖಿಲ್ ಸಂಸದರೆಂದು ಮುದ್ರಿಸಿಕೊಂಡಿದ್ದಾರೆ.

ಆಹ್ವಾನ ಪತ್ರಿಕೆಯ ಒಂದು ಪುಟದಲ್ಲಿ ವಿಶೇಷ ಆಹ್ವಾನಿತರೆಂದು ನಿಖಿಲ್ ಕುಮಾರಸ್ವಾಮಿ ಫೋಟೋ ಹಾಕಿದ್ದು, ಕೆಳಗಡೆ ಮಂಡ್ಯ ಸಂಸದರು ಎಂದು ಮುದ್ರಿಸಿದ್ದಾರೆ. ಫಲಿತಾಂಶಕ್ಕೂ ಮುನ್ನವೇ ಅಭಿಮಾನಿಯೊಬ್ಬರು ನಿಖಿಲ್‍ಗೆ ಸಂಸದರು ಎಂಬ ಬಿರುದು ಗಿಫ್ಟ್ ಕೊಟ್ಟಿದ್ದು ಗಮನ ಸೆಳೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News