ತುಮಕೂರು: ಚುನಾವಣಾಧಿಕಾರಿ ಅನುಮಾನಸ್ಪದ ಸಾವು

Update: 2019-05-23 17:45 GMT

ತುಮಕೂರು, ಮೇ 23: ಚುನಾವಣಾಧಿಕಾರಿಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ತುಮಕೂರಿನ ಚರ್ಚ್ ವೃತ್ತದ ಬಳಿ ನಡೆದಿದೆ. 

ಮೈಕ್ರೊ ಅಸ್ಸರ್ವರ್ ಅಧಿಕಾರಿ ಪ್ರಸಾದ್ (56) ಮೃತ ವ್ಯಕ್ತಿ. ಇವರು ತಿಪಟೂರು ಎಲ್‌ಐಸಿ ಶಾಖೆಯ ಹಿರಿಯ ಅಧಿಕಾರಿಯಾಗಿದ್ದರು. 

ಅಧಿಕಾರಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದರೆ ಎನ್ನುವ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ತುಮಕೂರು ನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News