ಬಿಜೆಪಿ ಪರ ಘೋಷಣೆ ಕೂಗಿದ ಕಾರ್ಯಕರ್ತರನ್ನು ಹೊರ ಕಳುಹಿಸಿದ ಪೊಲೀಸರು

Update: 2019-05-23 17:46 GMT

ಮೈಸೂರು,ಮೇ.23: ಮತ ಎಣಿಕೆ ಕೇಂದ್ರದ ಮುಂಭಾಗ ಬಿಜೆಪಿ ಮತ್ತು ನರೇಂದ್ರ ಮೋದಿ ಪರ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಹೊರ ಕಳುಹಿಸಿದ ಘಟನೆ ನಡೆಯಿತು.

ಗುರುವಾರ ಪಡುವಾರಹಳ್ಳಿಯ ಮಹರಾಣಿ ಕಾಲೇಜಿನ ಮತ ಎಣಿಕೆ ಕೇಂದ್ರದಿಂದ ಹೊರಬಂದ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪರ ಘೋಷಣೆ ಕೂಗಿದರು. ತಕ್ಷಣ ಆಗಮಿಸಿದ ಪೊಲೀಸರು ಎಣಿಕೆ ಕೇಂದ್ರದ ಸುತ್ತ ಘೋಷಣೆ ಕೂಗುವ ಹಾಗಿಲ್ಲ, ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಇಲ್ಲಿಂದ ತೆರಳುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News