ಆಳದ ಬಾವಿಗೆ ಬಿದ್ದಿದ್ದ ವೃದ್ಧೆಯನ್ನು ರಕ್ಷಿಸಿದ ಸ್ಥಳೀಯರು

Update: 2019-05-24 15:17 GMT

ವಿಜಯಪುರ, ಮೇ 24: ಆಯತಪ್ಪಿ ಬಾವಿಗೆ ಬಿದ್ದಿದ್ದ ವೃದ್ಧೆಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ತಂಗೆವ್ವ ಗದ್ಯಾಳ (85) ಅನ್ನುವ ವೃದ್ಧೆ ಬಾವಿಗೆ ಬಿದ್ದಿದ್ದರು. ತೋಟದಲ್ಲಿ ತೆಗೆಯಲಾಗಿದ್ದ ಬಾವಿಗೆ ಆಯತಪ್ಪಿ ಬಿದ್ದಿದ್ದರು.

ಆದರೆ ವೃದ್ಧೆ ಗಂಗೆವ್ವ ಬಾವಿಗೆ ಬಿದ್ದಿರುವುದು ಗೊತ್ತಾಗಿರಲಿಲ್ಲ. ಮನೆಯಲ್ಲಿ ಅವರು ಕಾಣದಿದ್ದಾಗ ಎಲ್ಲ ಕಡೆ ಹುಡಕಾಟ ನಡೆಸಿದ್ದಾರೆ. ನಂತರ ಅಲ್ಲಿನ ಸ್ಥಳೀಯರ ಸಹಾಯದಿಂದ ಬಾವಿಯಲ್ಲಿದ್ದ ಅವರನ್ನು ರಕ್ಷಣೆ ಮಾಡಿದ್ದಾರೆ.

65 ಅಡಿ ಆಳದ ಬಾವಿಯಲ್ಲಿ ಬಿದ್ದ ನಂತರ ತಂಗೆವ್ವ ಗದ್ಯಾಳ, ಬಾವಿಯಲ್ಲಿದ್ದ ನೀರಿನ ಮೋಟಾರಿನ ಪೈಪನ್ನ ಹಿಡಿದುಕೊಂಡು ನಿಂತು ತಮ್ಮ ಪ್ರಾಣ ಉಳಿಸಿಕೊಂಡಿದ್ದರು. ಸದ್ಯ ತಂಗೆವ್ವ ಆರೋಗ್ಯ ಸ್ಥಿರವಾಗಿದೆ, ಹೀಗಾಗಿ ಅವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. 65 ಅಡಿ ಆಳದ ಬಾವಿಯಲ್ಲಿ 15 ಅಡಿ ನೀರು ತುಂಬಿತ್ತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News