ಸೋಲಿಗೆ ಕಾರಣ ಏನೆಂದು ನಾಯಕರಿಗೆ ವರದಿ ನೀಡುತ್ತೇನೆ: ಸಿ.ಎಚ್.ವಿಜಯಶಂಕರ್

Update: 2019-05-24 17:10 GMT

ಮೈಸೂರು,ಮೇ.24: ನನ್ನ ಸೋಲಿಗೆ ಕಾರಣಗಳು ಏನು ಎಂದು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಅದನ್ನೆಲ್ಲ ಮುಖಂಡರಿಗೆ ವರದಿ ನೀಡುತ್ತೇನೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಒಳಗಿನ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಮೈತ್ರಿಯಲ್ಲಿ ವ್ಯತ್ಯಾಸವಾಗಿರುವುದು ನಿಜ. ನಾವು ನಂಬಿದ್ದ ಜನ ನಮಗೆ ಕೈಕೊಟ್ಟರು. ಮೈತ್ರಿಯು ನಾಯಕರಲ್ಲಷ್ಟೆ ಆಗಿತ್ತು ಕಾರ್ಯಕರ್ತರಲ್ಲಿ ಆಗಿರಲಿಲ್ಲ ಎಂಬುದು ಅರಿವಾಗುತ್ತಿದೆ. ನನ್ನ ಸೋಲಿಗೆ ಕಾರಣ ಏನು ಎಂಬ ಬಗ್ಗೆ ನನಗೆ ಸ್ಪಷ್ಟವಾಗಿ ತಿಳಿದಿದೆ. ನಮ್ಮ ನಾಯಕರಿಗೆ ವರದಿ ನೀಡುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News