ಸೋಲಿನಿಂದ ದೃತಿಗೆಡುವುದಿಲ್ಲ: ಆರ್.ಧ್ರುವನಾರಾಯಣ

Update: 2019-05-24 17:12 GMT

ಮೈಸೂರು, ಮೇ.24: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಾನು ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಇತ್ತು. ಆದರೆ ಕೊನೆಗಳಿಗೆಯಲ್ಲಿ ಸೋಲಾಗಿದೆ. ಇದರಿಂದ ಧೃತಿಗೆಡದೆ ಜನರ ಜೊತೆ ನನ್ನ ಒಡನಾಟವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಪರಾಜಿತ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆರ್.ಧ್ರುವನಾರಾಯಣ ತಿಳಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿದ ಅವರು, ನಾನು ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ನನ್ನಲ್ಲಿತ್ತು. ಹದಿನೈದು ಸುತ್ತು ಮುಗಿಯುವವರೆಗೂ ನನಗೆ ಉತ್ತಮ ಲೀಡ್ ಬಂದಿತ್ತು, ನಂತರ ಅಂತರ ಕಡಿಮೆಯಾಯಿತು ಎಂದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಎಲ್ಲಾ 8 ಕ್ಷೇತ್ರಗಳಲ್ಲೂ ನನಗೆ ಉತ್ತಮ ಮತಗಳು ಲಭಿಸಿವೆ. 5 ಕ್ಷೇತ್ರಗಳಲ್ಲಿ ನಮಗೆ ಲೀಡ್ ಬಂದಿರುವುದು, ಇನ್ನು ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಲೀಡ್ ಪಡೆದಿತ್ತು. ಕೊನೆ ಹಂತರದಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿದ್ದರಿಂದ ಸೋಲಾಯಿತು ಎಂದು ಹೇಳಿದರು.

ವಿ.ಶ್ರೀನಿವಾಸಪ್ರಸಾದ್ ಹಿರಿಯರು. ಅವರ ಗೆಲುವಿಗೆ ನಾನು ಶುಭಕೋರುತ್ತೇನೆ, ಅವರು ಕ್ಷೇತ್ರದಲ್ಲಿ ಉತ್ತಮವಾಗಿ ಅಭಿವೃದ್ದಿ ಮಾಡಲಿ ಎಂದು ಶುಭಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News