ಅನಾಥ ನವಜಾತ ಶಿಶುವಿನ ಪೋಷಕರ ಪತ್ತೆಗೆ ಮನವಿ

Update: 2019-05-25 11:48 GMT

ಚಿಕ್ಕಮಗಳೂರು, ಮೇ 25: ಜಿಲ್ಲೆಯ ಜಯಪುರ-ಬಾಳೆಹೊನ್ನೂರು ಮುಖ್ಯ ರಸ್ತೆಯ ಶ್ರೀನಿವಾಸಗೌಡ ಎಂಬವರ ಕಾಫಿ ತೋಟದ ಬಳಿ ಪ್ರಿಯದರ್ಶಿನಿ ಎಸ್ಟೇಟ್ ಕಡೆಗೆ ಹೋಗುವ ರಸ್ತೆ ಬದಿ ಎಪ್ರಿಲ್ 18 ರಂದು ಅನಾಥ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದ್ದು, ಮಗುವನ್ನು ಪಾಲನೆ ಪೋಷಣೆಗಾಗಿ ಸರ್ವೋದಯ ಸಮಾಜ ಸೇವಾ ದತ್ತು ಸಂಸ್ಥೆಯ ವಶಕ್ಕೆ ನೀಡಲಾಗಿದೆ. 

ಮಗುವಿನ ಭವಿಷ್ಯದ ದೃಷ್ಟಿಯಿಂದ ಕಾನೂನು ಬದ್ದ ದತ್ತು ಪ್ರಕ್ರಿಯೆಗೆ ಪೋಷಕರ ಪತ್ತೆ ಅವಶ್ಯಕವಾಗಿರುವುದರಿಂದ ಪೋಷಕರು ಪತ್ತೆಯಾದಲ್ಲಿ ಪೊಲೀಸ್ ಉಪಾಧೀಕ್ಷಕರು ಕೊಪ್ಪ ಉಪವಿಭಾಗ ಮೊ.ನಂ- 9480805121, ಪೊಲೀಸ್ ನಿರೀಕ್ಷಕರು, ಚಿಕ್ಕಮಗಳೂರು ಮೊ.ನಂ-9480805101, ಪೊಲೀಸ್ ವೃತ್ತ ನಿರೀಕ್ಷಕರು ನ.ರಾ.ಪುರ ವೃತ್ತ ಮೊ.ನಂ-9480805134 ಹಾಗೂ ಪೊಲೀಸ್ ಉಪ ನಿರೀಕ್ಷಕರು ಬಾಳೆಹೊನ್ನೂರು ಪೊಲೀಸ್ ಠಾಣೆ, ಮೊ.ನಂ-9480805158 ಮತ್ತು 08266-250666 ಗೆ ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News