"2019ರ ಚುನಾವಣೆಯಲ್ಲಿ ನಾನೂ ಸೋತಿದ್ದೇನೆಯೇ?": ಮೋದಿ ಬೆಂಬಲಿಗರಿಗೆ ರವೀಶ್ ಕುಮಾರ್ ಪತ್ರ

Update: 2019-05-27 04:45 GMT

"ಬಿಜೆಪಿ ಕಾರ್ಯಕರ್ತರಲ್ಲಿ ಬಿಜೆಪಿ ಎದ್ದು ಕಾಣುತ್ತದೆ , ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಾಂಗ್ರೆಸ್ ಬಿಟ್ಟು ಬೇರೆಲ್ಲವೂ ಕಾಣುತ್ತದೆ. ಒಂದೋ ಕಾಂಗ್ರೆಸ್ ಚುನಾವಣೆ ಎದುರಿಸುವುದನ್ನು ನಿಲ್ಲಿಸಬೇಕು, ಇಲ್ಲವೇ ಚುನಾವಣೆಯನ್ನು ಮಾಡು ಇಲ್ಲವೇ ಮಡಿ ಎಂಬಂತೆ ಎದುರಿಸಬೇಕು. ಅಂತಹ ಕಾಂಗ್ರೆಸ್ ಆಗಬೇಕು. ಎಡಪಕ್ಷಗಳ ಪಾತ್ರ ಮುಕ್ತಾಯಗೊಂಡಿದೆ. ಅದು ಕೊಳೆಯುತ್ತಿದೆ. ಅವರ ಬಳಿ ಕೇವಲ ಕಚೇರಿ ಮಾತ್ರ ಉಳಿದಿದೆ. ಕೆಲಸ ಮಾಡಲು ಏನೂ ಉಳಿದಿಲ್ಲ. ಒಂದು ಪಕ್ಷದ ರೂಪದಲ್ಲಿ ಅವರ ಪಾತ್ರ ಅಂತ್ಯವಾಗಿದೆ".

23 ಮೇ 2019ರಂದು ಫಲಿತಾಂಶ ಬರುತ್ತಿರುವಾಗ ನನ್ನ ವಾಟ್ಸಾಪ್ ಗೆ ಮೂರು ತರಹದ ಮೆಸೇಜುಗಳು ಬರಲಾರಂಭಿಸಿದವು. ಈಗ ಆ ಪೈಕಿ ಎರಡು ರೀತಿಯ ಮೆಸೇಜುಗಳ ಬಗ್ಗೆ ಹೇಳುತ್ತೇನೆ , ಮೂರನೇ ರೀತಿಯ ಮೆಸೇಜುಗಳ ಬಗ್ಗೆ ಕೊನೆಯಲ್ಲಿ ಹೇಳುತ್ತೇನೆ. ಹೆಚ್ಚಿನ ಮೆಸೇಜುಗಳು “ಇವತ್ತು ರವೀಶ್ ಮುಖ ಬಾಡಿದೆಯೇ ?”, “ನಿನ್ನ ಪರಿಸ್ಥಿತಿ ಏನಾಗಿದೆ ?”, “ನೀನು ಅವಮಾನಕ್ಕೊಳಗಾಗುವುದನ್ನು ಒಮ್ಮೆ ನೋಡಬೇಕು”, “ನಿನ್ನ ಫೋಟೋ ತೆಗೆದು ಕಳಿಸು”, “ಇವತ್ತು ನಿನ್ನ ಮುಖ ಹೇಗಿದೆ ಎಂದು ನೋಡಬೇಕು”, “ನಿನಗೆ ಬರ್ನಾಲ್ ತಂದು ಕೊಡಬೇಕೇ”, “ನೀನು ಟೈರ್ ಪಂಚರ್ ಕೆಲಸ ಮಾಡುವುದನ್ನು ನೋಡಬೇಕು” ... ... ಇಂತಹ ಮೆಸೇಜುಗಳು. ನಾನು ಅವರೆಲ್ಲರಿಗೂ ಗೆಲುವಿನ ಅಭಿನಂದನೆ ತಿಳಿಸಿದೆ. ಸಾಲದ್ದಕ್ಕೆ ಲೈವ್ ಕಾರ್ಯಕ್ರಮದಲ್ಲೇ ಇಂತಹ ಮೆಸೇಜುಗಳ ಬಗ್ಗೆ ಪ್ರಸ್ತಾಪ ಮಾಡಿ ನನ್ನ ಮೇಲೆ ನಾನೇ ನಕ್ಕೆ. ಇನ್ನೊಂದು ರೀತಿಯ ಮೆಸೇಜುಗಳು – “ನೀವು ಇನ್ನು ಮುಂದೆ ನಿರುದ್ಯೋಗ ಸಮಸ್ಯೆ, ರೈತರ ಸಂಕಟ , ನೀರಿನ ತೊಂದರೆ ಇತ್ಯಾದಿಗಳ ಬಗ್ಗೆ ಮಾತಾಡುವುದನ್ನು ಬಿಟ್ಟು ಬಿಡಿ. ಈ ಜನರು ಇದಕ್ಕೇ ಅರ್ಹರು. ನೀವು ಹೇಳುವುದನ್ನು ನಿಲ್ಲಿಸಿ. ಈಗ ನಿಮ್ಮನ್ನೂ ಜನ ತಿರಸ್ಕರಿಸಿದ್ದಾರೆ ಎಂದು ನಿಮಗನಿಸುದಿಲ್ಲವೇ ?, ನಿಮ್ಮ ಪತ್ರಿಕೋದ್ಯಮ ಮೋದಿಯನ್ನು ಏಕೆ ಸೋಲಿಸುವಲ್ಲಿ ವಿಫಲವಾಯಿತು ಎಂದು ನೀವು ಯೋಚಿಸಿ... ಈ ಧಾಟಿಯ ಮೆಸೇಜುಗಳು. ನಾನು ಭ್ರಮೆಯನ್ನು ಸಾಕಿಕೊಂಡಿಲ್ಲ. ಈ ಬಗ್ಗೆ ಈ ಹಿಂದೆಯೂ ಬರೆದಿದ್ದೇನೆ. ಸಾಕುವುದಿದ್ದರೆ ಆಡು ಸಾಕಿ, ಭ್ರಮೆ ಸಾಕಬೇಡಿ.

2019 ರ ಜನಾದೇಶ ನನ್ನ ವಿರುದ್ಧದ ಫಲಿತಾಂಶ ಹೇಗಾಗುತ್ತದೆ ?, ನಾನು ಕಳೆದ ಐದು ವರ್ಷಗಳಲ್ಲಿ ಹೇಳಿದ್ದು, ಬರೆದಿದ್ದು ಕೂಡ ಚುನಾವಣಾ ಕಣದಲ್ಲಿದ್ದವೇ ?, ನಾವು ತೋರಿಸಿದ ಲಕ್ಷಾಂತರ ಜನರ ಸಂಕಟಗಳು ಸುಳ್ಳಾಗಿದ್ದವೇ ?, ಯುವಜನರು, ರೈತರು ಹಾಗು ಬ್ಯಾಂಕುಗಳಲ್ಲಿ ಗುಲಾಮರಂತೆ ಕೆಲಸ ಮಾಡುವವರು ಬಿಜೆಪಿ ಬೆಂಬಲಿಗರು ಎಂದು ನನಗೆ ಗೊತ್ತಿತ್ತು. ಅವರೂ ಕೂಡ ನನಗೆ ಯಾವತ್ತೂ ಸುಳ್ಳು ಹೇಳಿಲ್ಲ. ಅವರೆಲ್ಲರೂ ಮೊದಲು ಅಥವಾ ನಂತರ ತಾವು ನರೇಂದ್ರ ಮೋದಿಯವರ ಬೆಂಬಲಿಗರು ಎಂದೇ ಹೇಳಿದ್ದರು. ಆದರೆ ಅವರು ಮೋದಿ ಬೆಂಬಲಿಗರು ಎಂಬ ಕಾರಣಕ್ಕೆ ಅವರ ಸಮಸ್ಯೆಗಳನ್ನು ನಾನು ನಿರ್ಲಕ್ಷಿಸಲಿಲ್ಲ. ಅವರ ಸಮಸ್ಯೆಗಳು ನಿಜವಾಗಿದ್ದರಿಂದ ನಾನು ಅವುಗಳನ್ನು ತೋರಿಸಿದ್ದೇನೆ. ಇವತ್ತು ಯಾವುದೇ ಒಬ್ಬ ಸಂಸದ ತಾನು ಐವತ್ತು ಸಾವಿರ ಜನರಿಗೆ ಉದ್ಯೋಗ ನೇಮಕಾತಿ ಪತ್ರ ಕೊಡಿಸಿದೆ ಎಂದು ಹೇಳುವ ಸ್ಥಿತಿಯಲ್ಲಿಲ್ಲ. ಆದರೆ ನನ್ನ ಉದ್ಯೋಗ ಸರಣಿ ಕಾರ್ಯಕ್ರಮಗಳಿಂದಾಗಿ ದಿಲ್ಲಿಯಿಂದ ಬಿಹಾರದವರೆಗೆ ಜನರಿಗೆ ಉದ್ಯೋಗ ನೇಮಕಾತಿ ಪತ್ರ ಬಂತು. ಹಲವು ಪರೀಕ್ಷೆಗಳ ಫಲಿತಾಂಶ ಪ್ರಕಟವಾದವು. ಇದರಲ್ಲಿ ದೊಡ್ಡ ಸಂಖ್ಯೆಯ ಜನರು ಅವರಿಗೆ ನೇಮಕಾತಿ ಪತ್ರ ಸಿಕ್ಕಿದ ಮೇಲೆ ನಿಮಗೆ ನಾವು ಬೈಯುತ್ತಿದ್ದೆವು ಎಂದು ಹೇಳಿ ಕ್ಷಮೆ ಕೇಳಿದ್ದಾರೆ. ಹೀಗೆ ನೇಮಕಾತಿ ಆದೇಶ ಸಿಕ್ಕಿದ ಬಳಿಕ ನನ್ನಲ್ಲಿ ಕ್ಷಮೆ ಕೇಳಿ ಬಂದಿರುವ ಸಾವಿರಾರು ಪತ್ರಗಳು ಹಾಗು ಮೆಸೇಜುಗಳ ಸ್ಕ್ರೀನ್ ಶಾಟ್ ನನ್ನಲ್ಲಿ ಬಿದ್ದುಕೊಂಡಿವೆ. ಈ ಪೈಕಿ ಒಬ್ಬನಾದರೂ ನಾನು ಮೋದಿಯವರಿಗೆ ಮತ ಹಾಕಬೇಡಿ ಎಂದು ಹೇಳಿದ್ದೇನೆ ಎಂದು ಹೇಳಲಾರ. ಹಾಂ, ಮತ ಮನಃಪೂರ್ವಕವಾಗಿ ಹಾಕಿ ಮತ್ತು ಮತ ಹಾಕಿದ ಮೇಲೆ ಎಲ್ಲ ನಾಗರಿಕರಂತೆ ವರ್ತಿಸಿ ಎಂದು ಹೇಳಿದ್ದೇನೆ.

ಈ ಐವತ್ತು ಸಾವಿರ ಜನರಿಗೆ ನೇಮಕಾತಿ ಆದೇಶ ಕೊಡಿಸಿದ ಯಶಸ್ಸು ಎಷ್ಟು ಮಹತ್ವದ್ದು ಎಂದರೆ ನಾನು ಮೋದಿ ಬೆಂಬಲಿಗರೆದುರು ಅವಮಾನಿತನಾದಾಗಲೂ ಇದನ್ನು ಹೆಮ್ಮೆಯಿಂದ ನನ್ನ ಎದೆಗೆ ಬ್ಯಾಡ್ಜ್ ನಂತೆ ತಗುಲಿಸಿಕೊಂಡಿರುತ್ತೇನೆ. ಏಕೆಂದರೆ ತಮ್ಮ ಸಮಸ್ಯೆ ಬಗೆಹರಿಸುವಂತೆ ನನ್ನನ್ನು ಸಂಪರ್ಕಿಸಿದವರು ಆಗ ನನ್ನನ್ನಲ್ಲ, ಮೋದಿ ಬೆಂಬಲಿಗರನ್ನೇ ಅವಮಾನಿಸಲಿದ್ದಾರೆ. ನನ್ನ ಉದ್ಯೋಗ ಸರಣಿ ಕಾರ್ಯಕ್ರಮ ಎಷ್ಟು ಪ್ರಭಾವದಿಂದಾಗಿ ಪ್ರಚಂಡ ಬಹುಮತವಿದ್ದ ಮೋದಿ ಸರಕಾರ ಕೂಡ ರೈಲ್ವೆಯಲ್ಲಿ ಲಕ್ಷಾಂತರ ಉದ್ಯೋಗ ತೆರೆಯಿತು. ಅದು ದೊಡ್ಡ ವಿಷಯವಾಯಿತು. ಮೋದಿ ಸರಕಾರದ ಎಲ್ಲ ಐದು ವರ್ಷಗಳಲ್ಲಿ ರೈಲ್ವೆಯಲ್ಲಿ ಎಷ್ಟು ಉದ್ಯೋಗಾವಕಾಶ ಸೃಷ್ಟಿಯಾಯಿತು ಮತ್ತು ಕೊನೆಯ ಒಂದು ವರ್ಷದಲ್ಲಿ ಎಷ್ಟಾಯಿತು ಎಂದು ನೀವೇ ನೋಡಿ. ಈ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದು ಗೋದಿ ಮೀಡಿಯಾಗಳೇ ಅಥವಾ ನಾನೇ ?, ಪ್ರೈಮ್ ಟೈಮ್ ನಲ್ಲಿ ಅದನ್ನು ತೋರಿಸಿದ್ದು ನಾನು. ರೈಲ್ವೆ ಸರಣಿ ಕಾರ್ಯಕ್ರಮದ ಮೂಲಕ ಸ್ವತಂತ್ರ ಸೇನಾನಿ ಎಕ್ಸ್ ಪ್ರೆಸ್ ನಂತಹ ರೈಲನ್ನು ಸ್ವಲ್ಪ ಸಮಯವಾದರೂ ಸಮಯಕ್ಕೆ ಸರಿಯಾಗಿ ಓಡಿಸಿದ್ದು ಮೋದಿ ವಿರೋಧಿ ಕೆಲಸವೇ ?, ಬಿಹಾರದ ಕಾಲೇಜುಗಳಲ್ಲಿ ಮೂರು ವರ್ಷದ ಬಿ ಎ ಪದವಿಯಲ್ಲಿ ಐದೈದು ವರ್ಷ ಕೊಳೆಯುವವರ ಬಗ್ಗೆ ಮಾತಾಡುವುದು ಮೋದಿ ವಿರೋಧಿಯೇ ?

ಈ ಐದು ವರ್ಷಗಳಲ್ಲಿ ನನ್ನನ್ನು ಕೋಟ್ಯಂತರ ಜನರು ಓದಿದರು. ಅದೆಷ್ಟೋ ಸಂಖ್ಯೆಯ ಜನರು ಬಂದು ನೋಡಿದರು. ಟಿವಿಯಲ್ಲಿ ನೋಡಿ, ಕೇಳಿದರು. ಹೊರಗೆ ಸಿಕ್ಕಿದಾಗ ಆಲಂಗಿಸಿದರು. ಪ್ರೀತಿಸಿದರು. ಅವರಲ್ಲಿ ನರೇಂದ್ರ ಮೋದಿಯವರ ಬೆಂಬಲಿಗರೂ ಇದ್ದರು. ಸಂಘದ ಜನರೂ ಇದ್ದರು, ವಿಪಕ್ಷದವರೂ ಇದ್ದರು. ಬಿಜೆಪಿಯವರೂ ಮೌನವಾಗಿ ಅಭಿನಂದಿಸುತ್ತಿದ್ದರು. ಇದರಲ್ಲಿ ಒಂದು ವಿಷಯ ನಾನು ತಿಳಿದುಕೊಂಡೆ. ಮೋದಿ ಬೆಂಬಲಿಗರಾಗಿರಲಿ ಅಥವಾ ವಿರೋಧಿಗಳಾಗಿರಲಿ ಅವರಿಗೆ ಗೋದಿ ಮೀಡಿಯಾ ಮತ್ತು ಪತ್ರಿಕೋದ್ಯಮದ ವ್ಯತ್ಯಾಸ ಗೊತ್ತಿತ್ತು. ಈ ಗೋದಿ ಮೀಡಿಯಾ ಮೋದಿಯವರ ಜನಪ್ರಿಯತೆಯ ಹೆಸರಲ್ಲಿ ನನ್ನ ಮೇಲೆ ದಾಳಿ ಮಾಡಿದಾಗ ಈ ಮೋದಿ ಬೆಂಬಲಿಗರು ಸುಮ್ಮನಾಗಿಬಿಡುತ್ತಾರೆ. ಭಾರತದಂತಹ ದೇಶದಲ್ಲಿ ಪ್ರಾಮಾಣಿಕ ಹಾಗು ನೈತಿಕವಾಗಿರುವುದಕ್ಕೆ ಒಂದು ಸಾಂಸ್ಥಿಕ ಮತ್ತು ಸಾಮಾಜಿಕ ಬೆಂಬಲ ಎಂಬುದು ಇರುವುದಿಲ್ಲ. ಇಲ್ಲಿ ಪ್ರಾಮಾಣಿಕನಾಗಿರುವ ಹೋರಾಟ ಏಕಾಂಗಿಯಾಗಿರುತ್ತದೆ ಮತ್ತು ಕೊನೆಗೆ ಅದರಲ್ಲಿ ಸೋಲಾಗುತ್ತದೆ. ಸತ್ಯವಾದಿ, ಪತ್ರಿಕೋದ್ಯಮದ ಮಾತಾಡುವ ರವೀಶ್ ಎಲ್ಲಿದ್ದಾರೆ ಎಂದು ಜನರು ಪ್ರಶ್ನಿಸುತ್ತಾರೆ. ನನ್ನಲ್ಲೂ ದೌರ್ಬಲ್ಯವಿದೆ. ನಾನು ಆದರ್ಶನೇನಲ್ಲ. ಹಾಗೆಂದು ನಾನೆಂದೂ ಹೇಳಿಕೊಂಡೂ ಇಲ್ಲ. ಆದರೆ ನೀವು ನನ್ನನ್ನು ಹಾಗೆ ಪರಿಗಣಿಸಿದರೆ ನೀವು ನಾನು ಹೇಳುತ್ತಿರುವ ಮತ್ತು ನನ್ನಂತಹ ಇನ್ನೂ ಹಲವು ಪತ್ರಕರ್ತರು ಪ್ರತಿಪಾದಿಸುತ್ತಿರುವ ಅದೇ  ಪತ್ರಿಕೋದ್ಯಮವನ್ನು ನೀವು ಮತ್ತೆ ಪುನರಾವರ್ತಿಸುತ್ತಿದ್ದೀರಿ.

ನನ್ನ ವೃತ್ತಿಯಲ್ಲಿ ನಾನು ಸೋಲುವ ಹೋರಾಟವನ್ನೇ ಮಾಡುತ್ತಿದ್ದೇನೆ ಎಂದು ನನಗೆ ಗೊತ್ತಿದೆ. ಇಷ್ಟು ದೊಡ್ಡ ಪ್ರಭುತ್ವ ಮತ್ತು ಕಾರ್ಪೊರೇಟ್ ಬಂಡವಾಳಶಾಹಿ ಜೊತೆ ಹೋರಾಡುವ ತಾಕತ್ತು ಕೇವಲ ಗಾಂಧೀಜಿಗೆ ಇತ್ತು. ಆದರೆ ನನ್ನಂತಹ ಪತ್ರಕರ್ತರು ಕಡಿಮೆ ಆದಾಯದಲ್ಲಿ ತೃಪ್ತಿ ಪಟ್ಟುಕೊಂಡು ನಿಜವಾದ ಪತ್ರಿಕೋದ್ಯಮ ಮಾಡುವುದನ್ನು ನೋಡಿದ ಮೇಲೆ ನಾನು ಅವರಿಗಿಂತ ಹೆಚ್ಚು ಮಾಡಬೇಕು ಎಂದು ನನಗನಿಸಿತು. ನಾನು ಪ್ರತಿದಿನ ಬೆಳಗ್ಗೆ ಇಂಗ್ಲೀಷಿನಿಂದ ಅನುವಾದ ಮಾಡಿ ಹಿಂದಿ ಓದುಗರಿಗಾಗಿ ಮೋದಿ ವಿರೋಧಿಯಾಗಲು ಬರೆದಿದ್ದಲ್ಲ. ಹಿಂದಿ ಓದುಗರು ಜಾಗೃತರಾಗಲಿ ಎಂದು ಬರೆದೆ. ಇದಕ್ಕಾಗಿ ಗಂಟೆಗಟ್ಟಲೆ ವ್ಯಯಿಸಿದೆ. ಇದನ್ನು ನಾನು ಏಕಾಂಗಿಯಾಗಿ ಸುದೀರ್ಘ ಕಾಲ ಮಾಡಲಾರೆ ಎಂದು ನನಗೆ ಚೆನ್ನಾಗಿ ಗೊತ್ತಿತ್ತು. ಮೋದಿ ವಿರೋಧಿ ಕ್ರೇಝ್ ಅಂತೂ ಇರಲೇ ಇಲ್ಲ. ನನ್ನ ವೃತ್ತಿ ಮೇಲೆ ಸ್ವಲ್ಪ ಹೆಚ್ಚೇ ಪ್ರೀತಿ ಇದ್ದಿದ್ದರಿಂದ ಪಣಕ್ಕೊಡ್ಡಿ ದುಡಿದೆ. ನನ್ನ ವೃತ್ತಿಯನ್ನೇ ಪ್ರಶ್ನಿಸುವುದರಲ್ಲಿ ಒಂದು ಅಪಾಯವಿತ್ತು. ನನ್ನ ಜೀವನೋಪಾಯವನ್ನೇ ಕಳೆದುಕೊಳ್ಳುವ ಅಪಾಯ. ಆದರೂ ಜೀವನದಲ್ಲಿ ಸ್ವಲ್ಪ ಸಮಯ ಅದನ್ನೂ ಮಾಡಿ ನೋಡಿದೆ. ಇದರಲ್ಲಿ ಅದರದ್ದೇ ಸಮಸ್ಯೆ ಇರುತ್ತದೆ, ಸವಾಲು ಇರುತ್ತದೆ ಆದರೆ ಇದರಿಂದ ಸಿಗುವ ಪಾಠ ಮಾತ್ರ ಅತ್ಯಂತ ಅಪರೂಪದ್ದು. ಈ ಆದಾಯದ ಪ್ರಶ್ನೆ ಕೇಳಿ ನಾನು ಮೋದಿ ಬೆಂಬಲಿಗರ ನಡುವೆ ಅವಿತುಕೊಳ್ಳಬಲ್ಲೆ, ಆದರೆ ನಿಮ್ಮ ಓದುಗರ ಮುಂದೆ ಮಾತ್ರ ಬರಲಾರೆ.

ನಾನು ಕೋಮುವಾದದ ವಿರುದ್ಧ ಎಲ್ಲರ ಎದುರು ಬಂದು ಖಂಡಿತ ಹೇಳಿದ್ದೇನೆ. ಇವತ್ತೂ ಹೇಳುತ್ತೇನೆ. ನಿಮ್ಮೊಳಗೆ ಧಾರ್ಮಿಕ ಮತ್ತು ಜಾತಿ ಪೂರ್ವಗ್ರಹ ಕುಳಿತುಬಿಟ್ಟಿದೆ. ನೀವು ಯಾಂತ್ರಿಕವಾಗುತ್ತಿದ್ದೀರಿ. ಮತ್ತೆ ಹೇಳುತ್ತೇನೆ. ಧಾರ್ಮಿಕ ಮತ್ತು ಜಾತಿ ಪೂರ್ವಗ್ರಹಪೀಡಿತ ಕೋಮುವಾದ ಒಂದು ದಿನ ನಿಮ್ಮನ್ನು ಮಾನವ ಬಾಂಬ್ ಆಗಿ ಪರಿವರ್ತಿಸುತ್ತದೆ. ಸ್ಟುಡಿಯೋದಲ್ಲಿ ನರ್ತಿಸುತ್ತಿರುವ ನಿರೂಪಕರನ್ನು ನೋಡಿದರೆ ಇದು ಪತ್ರಿಕೋದ್ಯಮವಲ್ಲ ಎಂದು ನಿಮಗೂ ಗೊತ್ತಾಗುತ್ತಿದೆ. ಬ್ಯಾಂಕುಗಳಲ್ಲಿ ಗುಲಾಮರಂತೆ ಕೆಲಸ ಮಾಡುತ್ತಿರುವ ಸಾವಿರಾರು ಮಹಿಳೆಯರು ಶೌಚಾಲಯ ಇಲ್ಲದ , ಗರ್ಭಕೋಶ ಬಿದ್ದು ಹೋಗುವಷ್ಟು ಸಮಸ್ಯೆ ಇರುವ ಬಗ್ಗೆ ನನಗೆ ಪತ್ರ ಬರೆದಿದ್ದು ನಾನು ಮೋದಿ ವಿರೋಧಿ ಎಂದೇ ?, ಅವರ ಆ ಪತ್ರಗಳು ಇಂದಿಗೂ ನನ್ನ ಬಳಿ ಇವೆ. ನಾನು ಅವರ ಸಮಸ್ಯೆಗಳಿಗೆ ಧ್ವನಿಯಾದೆ. ಬಳಿಕ ಅದೆಷ್ಟೋ ಕಡೆ ಬ್ಯಾಂಕುಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣವಾಯಿತು. ನಾನು ಮೋದಿ ಅಜೆಂಡಾ ನಡೆಸಿಲ್ಲ. ಅದು ನನ್ನ ಕೆಲಸವೂ ಅಲ್ಲ. ನೀವು ನನ್ನಿಂದ ಇದೇ ನಿರೀಕ್ಷೆ ಇಟ್ಟುಕೊಂಡಿದ್ದರೆ ಒಮ್ಮೆ ಅಲ್ಲ ನೂರು ಬಾರಿ ಯೋಚಿಸಿ ಎಂದೇ ಹೇಳುತ್ತೇನೆ.  

ಪತ್ರಿಕೋದ್ಯಮದಲ್ಲೂ ಗತಕಾಲದ ಪಾಪಗಳ ಸ್ಮರಣೆ ಖಂಡಿತ ಇದೆ. ಇದನ್ನು ಮೋದಿ ಆಗಾಗ ಮಾಡುತ್ತಿರುತ್ತಾರೆ. ಆದರೆ ಅವರ ಕಾಲದ ಪತ್ರಿಕೋದ್ಯಮದ ಮಾಡೆಲ್ ಗತಕಾಲದ ಪಾಪಗಳನ್ನೇ ಆಧರಿಸಿದೆ ಎಂಬುದನ್ನು ಅವರು ಮರೆತುಬಿಡುತ್ತಾರೆ. ಪತ್ರಿಕೋದ್ಯಮ ಸೋತಿದೆ ಎಂದು ನಾನು ಒಪ್ಪಿಕೊಳ್ಳುವುದಿಲ್ಲ. ಪತ್ರಿಕೋದ್ಯಮವೇ ಮುಗಿದು ಹೋಗುತ್ತದೆ, ಅದು ಬೇರೆ ಮಾತು. ಪತ್ರಿಕೋದ್ಯಮವೇ ಉಳಿಯದೆ ಇರುವಾಗ ನೀವು ಪತ್ರಿಕೋದ್ಯಮಕ್ಕಾಗಿ ನನ್ನ ಕಡೆಯೇ ನೀವು ಏಕೆ ನೋಡುತ್ತೀರಿ ?, ನೀವು ಸಂಪೂರ್ಣ ಸಮಾಪ್ತಿಯ ಸಂಕಲ್ಪ ಮಾಡಿದ್ದೀರಾ ?, ನಾನು ನನ್ನ ಮಾತಾಡುವಾಗ ಹೋರಾಟ ಮಾಡುತ್ತಿರುವ ಆ ಎಲ್ಲ ಪತ್ರಕರ್ತರ ಮಾತೂ ಅದರಲ್ಲಿದೆ. ಪತ್ರಿಕೋದ್ಯಮದ ಸಂಸ್ಥೆಗಳಲ್ಲಿ ಒಂದುಗೂಡಿರುವ ಅನೈತಿಕ ಶಕ್ತಿಗಳಿಂದಾಗಿ ಪತ್ರಿಕೋದ್ಯಮ ಮುಗಿದು ಹೋಗಿದೆ. ಅದನ್ನು ಒಬ್ಬ ವ್ಯಕ್ತಿ ಮಾಡಲಾರ. ಹೀಗಿರುವಾಗ ನಮ್ಮಂತಹವರು ಏನು ಮಾಡಬಲ್ಲರು ?, ಆದರೂ ಇಂತಹ ಕೆಲಸವನ್ನು ಕೇವಲ ಮೋದಿ ವಿರೋಧಿ ಕನ್ನಡಕದಿಂದ ನೋಡುವುದು ಸರಿಯಲ್ಲ. ಇದು ನಮ್ಮ ವೃತ್ತಿಯೊಳಗೆ ಬಂದಿರುವ ಅಧಃಪತನದ ವಿರೋಧವಾಗಿದೆ. ಈ ವಿಷಯವನ್ನು ಮೋದಿ ಬೆಂಬಲಿಗರಿಗೆ ಈ ಅವಧಿಯಲ್ಲಿ ತಿಳಿಸಿಕೊಡಬೇಕಾಗಿದೆ. ಮೋದಿ ಬೆಂಬಲ ಬೇರೆ. ಒಳ್ಳೆಯ ಪತ್ರಿಕೋದ್ಯಮದ ಬೆಂಬಲ ಬೇರೆ. ನಾನು ಮೋದಿ ಬೆಂಬಲಿಗರಲ್ಲೂ ವಿನಂತಿ ಮಾಡುವುದೇನೆಂದರೆ ಅವರು ಈ ಗೋದಿ ಮೀಡಿಯಾ ನೋಡುವುದನ್ನು ಬಂದ್ ಮಾಡಬೇಕು. ಅಂತಹ ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿ. ಇವುಗಳ ಹೊರತಾಗಿಯೂ ಮೋದಿಯವರನ್ನು ಬೆಂಬಲಿಸಲು ಸಾಧ್ಯವಿದೆ.

ಏನೇ ಇರಲಿ, 23 ಮೇ  2019ಕ್ಕೆ ಬಂದ ಬಿರುಗಾಳಿ ಈಗ ಹೋಗಿದೆ ಆದರೆ ಗಾಳಿ ಇನ್ನೂ ಜೋರಾಗಿಯೇ ಇದೆ. ನರೇಂದ್ರ ಮೋದಿಯವರು ಭಾರತದ ಜನರ ಮನೆ ಮನಗಳಲ್ಲಿ ಏಕಸ್ವಾಮ್ಯ ಸಾಧಿಸಿಬಿಟ್ಟಿದ್ದಾರೆ. 2014ರಲ್ಲಿ ಅವರಿಗೆ ಮನಸ್ಸಿಂದ ಮತ ಸಿಕ್ಕಿದ್ದರೆ 2019 ರಲ್ಲಿ ತನುಮನಗಳಿಂದ ಮತ ಬಂದಿದೆ. ತಮ್ಮ ಮೇಲೆ ಬಂದಿದ್ದ ಎಲ್ಲ ಸಂಕಟಗಳನ್ನು ಸಹಿಸಿಕೊಂಡು ಜನರು ಮನಃಪೂರ್ವಕವಾಗಿ ಅವರಿಗೆ ಮತ ಹಾಕಿದ್ದಾರೆ. ಅವರ ಈ ಜಯವನ್ನು ಉದಾರತೆಯಿಂದ ಸ್ವೀಕರಿಸಬೇಕು. ನಾನು ಅದನ್ನು ಸ್ವೀಕರಿಸುತ್ತೇನೆ. ಜನರನ್ನು ತಿರಸ್ಕರಿಸಿ ನೀವು ಪ್ರಜಾಪ್ರಭುತ್ವವಾದಿ ಆಗಲಾರಿರಿ. ಈ ಖುಷಿಯಲ್ಲಿ ಭವಿಷ್ಯದ ಅಪಾಯಗಳನ್ನು ನೋಡಬಹುದು ಆದರೆ ಅದಕ್ಕೂ ನೀವು ಈ ಖುಷಿಯಲ್ಲಿ ಶಾಮೀಲಾಗಬೇಕು. ಜನರನ್ನು ಮೋಡಿ ಮಾಡಿ ಮೋದಿಯಾಗಿಸುವ ವಿಷಯ ಯಾವುದು ಎಂದು ತಿಳಿದುಕೊಳ್ಳಲೂ ಇದರಲ್ಲಿ ಶಾಮೀಲಾಗಬೇಕು. ತಮ್ಮ ನಾಯಕರಲ್ಲೇ ತಾವು ಒಂದಾಗಿಬಿಡುವ ಇದನ್ನು ಅಂಧಭಕ್ತಿ ಎಂದೂ ಹೇಳಬಹುದು. ಆದರೆ ಇದನ್ನು ಭಕ್ತಿಯ ಪರಾಕಾಷ್ಠೆ ಎಂದೂ ನೋಡಬೇಕು. ಮೋದಿಯವರಿಗೆ ಜನರೇ ಮೋದಿಯಾಗುತ್ತಿರುವುದು ಆ ಪರಾಕಾಷ್ಠೆಯ ಪ್ರತೀಕವಾಗಿ ಕಾಣುತ್ತಿದೆ. ಮನೆಮನೆಯಲ್ಲಿ ಮೋದಿ ಬದಲು ನೀವು ಜನಜನ ಮೋದಿ ಎಂದು ಹೇಳಬಹುದು.

2014ರ ಬಳಿಕ ಈ ದೇಶದ ಗತಕಾಲ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಬಿಂದು ( ರೆಫರೆನ್ಸ್ ಪಾಯಿಂಟ್ ) ಬದಲಾಗಿದೆ ನಾನು ಮೊದಲೇ ಹೇಳುತ್ತಾ ಬಂದಿದ್ದೇನೆ. ಚುನಾವಣೆಯ ಮೊದಲೇ ಮೋದಿಯವರು ಹೊಸ ಭಾರತದ ಮಾತಾಡುತ್ತಿದ್ದರು. ಆ ಹೊಸ ಭಾರತ ಈಗ ಅವರ ಕಲ್ಪನೆಯ ಭಾರತವಾಗಿ ಬದಲಾಗಿದೆ. ಪ್ರತಿ ಜನಾದೇಶದಲ್ಲಿ ಅವಕಾಶಗಳು ಮತ್ತು ಅಪಾಯಗಳು ಇರುತ್ತವೆ. ಇವುಗಳಿಂದ ಮುಕ್ತ ಜನಾದೇಶ ಎಂಬುದಿಲ್ಲ. ಜನರು ಎಲ್ಲ ಅಪಾಯಗಳ ಹೊರತಾಗಿಯೂ ಒಂದು ಅವಕಾಶವನ್ನು ಆಯ್ಕೆ ಮಾಡಿದ್ದಾರೆ ಎಂದಾದರೆ ಅವರಿಗೆ ಆ ಅಪಾಯಗಳನ್ನು ಎದುರಿಸುವ ಧೈರ್ಯ ಕೂಡ ಇದೆ ಎಂದರ್ಥ. ಜನರು ಭಯಭೀತರಾಗಿಲ್ಲ ಎಂದರ್ಥ. ಇದು ಭಯದ ಜನಾದೇಶ ಅಲ್ಲ . ಇದರಿಂದ ಭಯಭೀತರಾಗಲೂ ಬಾರದು. ಐತಿಹಾಸಿಕ ಕಾರಣಗಳಿಂದಾಗಿ ಜನರ ನಡುವೆ ಹಲವು ಅತೃಪ್ತಿಗಳಿವೆ. ಹಲವು ದಶಕಗಳಿಂದ ಇದನ್ನು ಜನರು ಸಹಿಸಿಕೊಂಡು ಬಂದಿದ್ದಾರೆ. ಈಗ ಆ ಗತಕಾಲದ ಅತೃಪ್ತಿಯ ನೆನಪನ್ನು ಸಹಿಸಿಕೊಳ್ಳಲಾಗಿಲ್ಲ. ಅದೇ ಈ ಬಾರಿ ವಿಚಾರಧಾರೆಯ ಹೆಸರಲ್ಲಿ ಪ್ರಕಟವಾಗಿದೆ. ಅದನ್ನು ಹೊಸ ಭಾರತ ಎಂದು ಬಣ್ಣಿಸಲಾಗುತ್ತಿದೆ. 

ನೈತಿಕ ಶಕ್ತಿ ಇರುವವರು ಮಾತ್ರ ನರೇಂದ್ರ ಮೋದಿಯವರಿಗೆ ಪರ್ಯಾಯವಾಗಬಲ್ಲರು ಎಂದು ನಾನು ಯಾವಾಗಲೂ ಹೇಳಿದ್ದೇನೆ. ನನ್ನ ಲೇಖನಗಳಲ್ಲೂ ಈ ನೈತಿಕ ಬಲದ ಮಾತಾಡಿದ್ದೇನೆ. ಖಂಡಿತ ನರೇಂದ್ರ ಮೋದಿಯವರ ಪಕ್ಷದಲ್ಲೇ ಬೇಕಾದಷ್ಟು ಅನೈತಿಕ ಶಕ್ತಿಗಳು ಹಾಗು ಸಂಪನ್ಮೂಲಗಳ ವಿಪುಲ ಭಂಡಾರವೇ ಇದೆ. ಆದರೆ ಅದನ್ನು ಜನರು ಗತಕಾಲದ ಕಹಿ ನೆನಪುಗಳ ಗುಣದೋಷದಂತೆ ನೋಡುತ್ತಿದ್ದಾರೆ. ಹಾಗೆ ಸಹಿಸಿಕೊಳ್ಳುತ್ತಿದ್ದಾರೆ. ಮೋದಿಯವರೂ ಆ ಗತಕಾಲದ ಕಹಿ ನೆನಪುಗಳನ್ನು ಜೀವಂತ ಇಡುತ್ತಾರೆ. ಅವರು ಇದನ್ನು ಪ್ರತಿಕ್ಷಣ ನೆನಪು ಮಾಡಿಸುತ್ತಲೇ ಇರುವುದನ್ನು ನೀವು ನೋಡಿದ್ದೀರಿ. ಜನರನ್ನು ಗತಕಾಲದ ವರ್ತಮಾನದಲ್ಲಿ ಇಡುತ್ತಾರೆ ಅವರು. ಮೋದಿಯವರ ಪಕ್ಷದಲ್ಲಿರುವ ಅನೈತಿಕ ಶಕ್ತಿಗಳು ವಿಪಕ್ಷದಲ್ಲೂ ಇವೆ ಎಂಬುದು ಜನರಿಗೆ ಗೊತ್ತಿದೆ. ಎರಡು ಸಮಾನ ಅನೈತಿಕ ಶಕ್ತಿಗಳ ನಡುವೆ ಜನ ನಮ್ಮನ್ನೇ ಆಯ್ಕೆ ಮಾಡಬಹುದು ಎಂದು ವಿಪಕ್ಷ ಭಾವಿಸಿತು. ಹಾಗಾಗಿ ಅದೂ ಅಳಿದುಳಿದ ಅನೈತಿಕ ಶಕ್ತಿಗಳ ಮೊರೆ ಹೋಯಿತು. ಮೋದಿಯವರು ಆ ಅನೈತಿಕ ಶಕ್ತಿಗಳನ್ನೂ ದುರ್ಬಲ ಹಾಗು ಟೊಳ್ಳು ಮಾಡಿಬಿಟ್ಟರು. ಹಾಗಾಗಿ ವಿಪಕ್ಷ ನಾಯಕರು ಬಿಜೆಪಿಯತ್ತ ಹೋದರು. ವಿಪಕ್ಷದಲ್ಲಿ ಮಾನವ ಹಾಗು ಆರ್ಥಿಕ ಎರಡೂ ಸಂಪತ್ತುಗಳು ಖಾಲಿಯಾದವು. ಎರಡೂ ಕಡೆ ಅನೈತಿಕ ಶಕ್ತಿಗಳೇ ಆಧಾರ. ಇದರಿಂದ ವಿಪಕ್ಷಕ್ಕೆ ಒಂದು ಹೊಸ ಅವಕಾಶ ಸೃಷ್ಟಿಯಾಯಿತು. ಅದು ಚುನಾವಣೆಯ ಚಿಂತೆ ಬಿಟ್ಟು ತನ್ನ ರಾಜಕೀಯ ಹಾಗು ವೈಚಾರಿಕ ಪುನರುಜ್ಜೀವನಕ್ಕೆ ಪ್ರಯತ್ನಿಸಬಹುದಿತ್ತು. ಆದರೆ ವಿಪಕ್ಷ ಹಾಗೆ ಮಾಡಲಿಲ್ಲ.

ವಿಪಕ್ಷ ಗತಕಾಲದ ಕಹಿ ನೆನಪುಗಳಿಗಾಗಿ ಕ್ಷಮೆ ಕೇಳಬೇಕಿತ್ತು. ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ಹೊಸ ಭರವಸೆ ಕೊಡಬೇಕಿತ್ತು. ಈ ಮಾತನ್ನು ಜನರಿಗೆ ತಲುಪಿಸಲು ಸುಡುವ ಬಿಸಿಲಲ್ಲಿ ನಡೆಯಬೇಕಿತ್ತು. ಅವರು ಅದನ್ನೂ ಮಾಡಲಿಲ್ಲ. 2014ರ ಬಳಿಕ ನಾಲ್ಕು ವರ್ಷ ಮನೆಯಲ್ಲೇ ಕುಳಿತರು. ಜನರ ನಡುವೆ ಜನರಾಗಿ ಹೋಗಲಿಲ್ಲ. ಜನರ ಸಮಸ್ಯೆಗಳ ಬಗ್ಗೆ ತಾತ್ಕಾಲಿಕವಾಗಿ ಅಲ್ಲಲ್ಲಿ ಮಾತಾಡಿ ಮತ್ತೆ ಮನೆಗೆ ಹೋಗಿ ಕೂತರು. 2019 ಬಂದಾಗ ತಮ್ಮ ಅಳಿದುಳಿದ ಅನೈತಿಕ ಶಕ್ತಿಗಳ ಸಮೀಕರಣದ ಮೂಲಕ ಒಂದು ಬೃಹತ್ ಅನೈತಿಕ ಶಕ್ತಿಸಮೂಹವನ್ನು ಎದುರು ಹಾಕಿಕೊಳ್ಳಲು ಹೊರಟರು. ಬೇರೆ ಬೇರೆ ರಾಜಕೀಯ ಪಕ್ಷಗಳ ಪ್ರಸ್ತುತತೆ ಈಗ ಮುಗಿದಿದೆ ಎಂಬುದನ್ನು ವಿಪಕ್ಷ ತಿಳಿದುಕೊಳ್ಳಬೇಕಿತ್ತು. ಎಸ್ಪಿ, ಬಿಎಸ್ಪಿ ಅಥವಾ ಆರ್ ಜೆ ಡಿ ಗಳ ಮೂಲಕ ನಮ್ಮ ಪ್ರಜಾಪ್ರಭುತ್ವದಲ್ಲಿ ಬಂದಿದ್ದ ಸಾಮಾಜಿಕ ಸಂತುಲನೆಗೆ ಈಗ ಯಾವುದೇ ಪಾತ್ರ ಇಲ್ಲ. ಇದು ವಾಸ್ತವ.

ಈ ರಾಜಕೀಯ ಪಕ್ಷಗಳು ಸಮಾಜದ ಹಿಂದುಳಿದ ಹಾಗು ವಂಚಿತ ಸಮುದಾಯಗಳನ್ನು ಅಧಿಕಾರದತ್ತ ತರುವ ಐತಿಹಾಸಿಕ ಕೆಲಸ ಮಾಡಿರುವುದು ಹೌದು. ಆದರೆ ಈ ಪ್ರಕ್ರಿಯೆಯಲ್ಲಿ ಅವರು ಇತರ ಹಿಂದುಳಿದವರನ್ನು ಮರೆತು ಬಿಟ್ಟರು. ಈ ಪಕ್ಷಗಳಲ್ಲೂ ಈ ಹಿಂದುಳಿದವರ ಪ್ರಾತಿನಿಧ್ಯ ಇತರ ಪಕ್ಷಗಳಲ್ಲಿ ಇರುವಂತೆಯೇ ನಕಲಿಯಾಗಿಬಿಟ್ಟಿತು. ಈ ಪಕ್ಷಗಳು ಈಗ ಅಪ್ರಸ್ತುತವಾಗಿರುವಾಗ ಅವುಗಳನ್ನು ವಿಸರ್ಜಿಸುವ ಧೈರ್ಯವನ್ನೂ ತೋರಿಸಬೇಕು. ತಮ್ಮ ಪುರಾತನ ಮಹತ್ವಾಕಾಂಕ್ಷೆಗಳನ್ನೂ ಬಿಟ್ಟು ಬಿಡಬೇಕಿತ್ತು. ಭಾರತೀಯರು ಇನ್ನು ಹೊಸ ವಿಚಾರ ಹಾಗು ಹೊಸ ಪಕ್ಷಗಳನ್ನು ಸ್ವಾಗತಿಸುವವರೆಗೆ ನರೇಂದ್ರ ಮೋದಿಯವರ ಜೊತೆಗೇ ಇರುತ್ತದೆ.

ಈಗ ಸಮಾಜ ಮತ್ತು ರಾಜಕೀಯದ ಹಿಂದೂಕರಣವಾಗಿದೆ. ಇದು ಶಾಶ್ವತ ಎಂದು ನಾನು ಒಪ್ಪುವುದಿಲ್ಲ. ಹೇಗೆ ಬಹುಜನ ಶಕ್ತಿಗಳ ಉತ್ಥಾನ ಶಾಶ್ವತವಾಗಿರಲಿಲ್ಲವೋ ಹಾಗೆಯೆ ಇದು ಕೂಡ ಶಾಶ್ವತವಲ್ಲ. ಇದು ಇತಿಹಾಸದ ಒಂದು ಚಕ್ರ. ಹೇಗೆ ಮಾಯಾವತಿ ಸವರ್ಣೀಯರ ಬೆಂಬಲ ಪಡೆದು ಮುಖ್ಯಮಂತ್ರಿಯಾದರೋ ಅದೇ ರೀತಿ ಇವತ್ತು ಸಂಘ ಪರಿವಾರ ಬಹುಜನರ ಬೆಂಬಲ ಪಡೆದು ಹಿಂದೂ ರಾಷ್ಟ್ರ ನಿರ್ಮಿಸುತ್ತಿದೆ. ಸವರ್ಣೀಯರು ತಮ್ಮ ಜಾತಿಯ ಓಟ್ ಬ್ಯಾಂಕ್ ಹಿಡಿದುಕೊಂಡು ಒಮ್ಮೆ ಎಸ್ಪಿ, ಒಮ್ಮೆ ಬಿಎಸ್ಪಿ ಅಥವಾ ಆರ್ ಜೆ ಡಿ ಯ ವೇದಿಕೆಗಳಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ಅಲ್ಲಿ ಅವರು ನೆಲೆ ಕಂಡುಕೊಂಡಾಗ ಉಳಿದ ಬಹುಜನರು ಬೇರೆ ವೇದಿಕೆಗೆ ಹೋದರು.

ಬಹುಜನ ರಾಜಕೀಯ ಜಾತಿಯ ವಿರುದ್ಧ ಯಾವಾಗ ರಾಜಕೀಯ ಅಭಿಯಾನ ನಡೆಸಿವೆ ? ಜಾತಿ ಸಂಯೋಜನೆಯ ರಾಜಕೀಯ ನಡೆಯುವಾಗ ಸಂಘ ಪರಿವಾರವೂ ಜಾತಿ ಸಂಯೋಜನೆಯ ರಾಜಕೀಯ ಮಾಡಿತು. ಈ ಪ್ರಾದೇಶಿಕ ಪಕ್ಷಗಳು ಬಳಿಕ ಅಭಿವೃದ್ಧಿ ರಾಜಕೀಯ ಮಾಡಿದವಾದರೂ ರಾಷ್ಟ್ರೀಯ ಮಟ್ಟದಲ್ಲಿ ಅವು ಕೇವಲ ಹೆದ್ದಾರಿಗಳನ್ನು ಮಾಡಲು ಸೀಮಿತವಾದವು. ಚಂದ್ರಭಾನ್ ಪ್ರಸಾದ್ ಅವರ ಒಂದು ಮಾತು ನೆನಪಾಗುತ್ತಿದೆ. ಮಾಯಾವತಿ ಯಾಕೆ ಆರ್ಥಿಕ ವಿಷಯಗಳ ಬಗ್ಗೆ, ವಿದೇಶಾಂಗ ನೀತಿಯ ಬಗ್ಗೆ ಮಾತಾಡುವುದಿಲ್ಲ ? ಇದು ಎಲ್ಲ ಪ್ರಾದೇಶಿಕ ಪಕ್ಷಗಳ ಸ್ಥಿತಿ. ಅವರು ಪ್ರಾದೇಶಿಕ ರಾಜಕೀಯ ಮಾಡುತ್ತಾರೆ. ಆದರೆ ರಾಷ್ಟ್ರೀಯ ರಾಜಕೀಯ ಮಾಡುವಲ್ಲಿ ವಿಫಲರಾಗುತ್ತಾರೆ.

ಬಹುಜನ ಆಂದೋಲನವಾಗಿ ಮೂಡಿಬಂದ ಪಕ್ಷಗಳು ತಮ್ಮ ಸೈದ್ಧಾಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News