ಮೈಸೂರು: ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದ ನಾಲ್ವರ ಬಂಧನ

Update: 2019-05-27 15:21 GMT

ಮೈಸೂರು,ಮೇ.27: ಕುಡಿದ ಅಮಲಿನಲ್ಲಿ ಬೆಂಗಳೂರಿನ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದ ನಾಲ್ವರನ್ನು ಕೆ.ಆರ್.ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಗೊಲ್ಲರಕೇರಿಯ ಚಂದು ಮನೋಜ್, ಇಟ್ಟಿಗೆಗೂಡಿನ ಹರ್ಷಿತ್ ಗೌಡ, ವೀಣೇಶೇಷಣ್ಣ ರಸ್ತೆಯ ನಿವಾಸಿ ಮಹೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಮೇ 19 ರಂದು ಬೆಂಗಳೂರಿನ ಕಾರ್ತಿಕ್ ಎಂಬುವರು ತಮ್ಮ ಸಂಬಂಧಿಕರೊಂದಿಗೆ ಪ್ರವಾಸಕ್ಕೆಂದು ಬಂದಿದ್ದ ವೇಳೆ ಸೀತಾವಿಲಾಸ ಸರ್ಕಲ್ ಬಳಿ ಈ ನಾಲ್ವರು ಕಾರ್ತಿಕ್ ಅವರ ಜೊತೆಗಿದ್ದ ಸಂಬಂಧಿ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸಿದ್ದದಲ್ಲದೇ, ಕಾರ್ತಿಕ್ ಸೇರಿದಂತೆ ನಾಲ್ವರ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಕಾರ್ತಿಕ್ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಸಿದಂತೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News