ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತ: ಓರ್ವನ ಸ್ಥಿತಿ ಗಂಭೀರ

Update: 2019-05-27 17:48 GMT

ಚಾಮರಾಜನಗರ, ಮೇ 27: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಭಾನುವಾರ ರಾತ್ರಿ ಚಾಕಿವಿನಿಂದ ಇರಿದ ಘಟನೆ ನಡೆದಿದ್ದು, ಚಾಕು ಇರಿತಕ್ಕೆ ಒಳಗಾದ ಯುವಕ ಸಾವು ಬದುಕಿನ ಹೋರಾಟ ನಡೆಸುತ್ತಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪಟ್ಟಣದ ರಾಮಸಮುದ್ರ ಬಡಾವಣೆಯ ಅಭಿ(25) ಎಂಬ ಯುವಕನಿಗೆ ಕ್ಷುಲ್ಲಕ ವಿಚಾರಕ್ಕೆ ಸಿನಿಮೀಯ ರೀತಿಯಲ್ಲಿ ಚಾಕು ಇರಿತವಾಗಿದ್ದು, ಐವರ ಮೇಲೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಚೂರಿ ಇರಿತಕ್ಕೆ ಒಳಗಾದ ಅಭಿಯ ಸ್ಥಿತಿ ಗಂಭೀರವಾಗಿದೆ.

ಚಾಮರಾಜನಗರ ಪಟ್ಟಣದ ಜೋಡಿ ರಸ್ತೆಯಲ್ಲಿರುವ ಟಿವಿಎಸ್ ಶೋರೂಂ ಬಳಿ ಭಾನುವಾರ ರಾತ್ರಿ ಸುಮಾರು 7.30 ರಲ್ಲಿ ಅಡ್ಡಗಟ್ಟಿದ ಐವರ ತಂಡ ಅಭಿಗೆ  ಹತ್ತಾರು ಭಾರೀ ಚಾಕುವಿನಿಂದ ಇರಿತಗೊಳಿಸಿದೆ. ಗಾಯಾಳು ಅಭಿಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿ, ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News