ರಾಜ್ಯದ ಹಿತಕ್ಕೆ ನಿಮ್ಮ ಅಧಿಕಾರ ಮುಡಿಪಾಗಿರಲಿ: ಡಿವಿಎಸ್, ಜೋಷಿ, ಸುರೇಶ್ ಅಂಗಡಿಗೆ ಸಿದ್ದರಾಮಯ್ಯ ಸಲಹೆ

Update: 2019-05-31 14:18 GMT

ಬೆಂಗಳೂರು, ಮೇ 31: ‘ನಿಮ್ಮ ದನಿ ಸಮಸ್ತ ಕನ್ನಡಿಗರ ಪರವಾಗಿರಲಿ, ರಾಜ್ಯದ ಹಿತಾಸಕ್ತಿಯ ರಕ್ಷಣೆಗೆ ನಿಮ್ಮ ಅಧಿಕಾರ ಮುಡಿಪಾಗಿರಲಿ’ ಎಂದು ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.

ಕೇಂದ್ರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಪಡೆದಿರುವ ರಾಜ್ಯದ ಸಂಸದರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ ಮತ್ತು ಸುರೇಶ್ ಅಂಗಡಿ ಅವರಿಗೆ ಅಭಿನಂದನೆಗಳು ಮತ್ತು ಶುಭ ಕಾಮನೆಗಳು’ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಶುಭ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News