ಈದುಲ್ ಫಿತ್ರ್ ಶುಭ ಹಾರೈಸಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ
Update: 2019-06-04 19:46 IST
ಬೆಂಗಳೂರು, ಜೂ.4: ಈದುಲ್ ಫಿತ್ರ್, ಅಂದರೆ ಮುಸ್ಲಿಮರು 30 ದಿನಗಳ ಉಪವಾಸದ ನಂತರ ಆಚರಿಸುವ ಈ ಹಬ್ಬಕ್ಕೆ ಇಸ್ಲಾಮಿನಲ್ಲಿ ಬಹಳ ಮಹತ್ವದ ಸ್ಥಾನವಿದೆ. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ದೇಶದಲ್ಲಿ ಮತ್ತೊಮ್ಮೆ ‘ಮೋದಿ ಸರಕಾರ’ ರಚನೆಯಾಗಿದ್ದು, ಪ್ರಧಾನಿ ಹೇಳಿದಂತೆ ‘ಸಬ್ ಕಾ ಸಾಥ್-ಸಬ್ ಕಾ ವಿಕಾಸ್’ ಮತ್ತು ಇದರ ಜೊತೆ ‘ಸಬ್ ಕಾ ವಿಶ್ವಾಸ್’ನೊಂದಿಗೆ ಎಲ್ಲರೂ ನಡೆದು ಕೂಡಿ ಬಾಳೋಣ ಮತ್ತು ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಭಾರತ ಒಂದು ಭವ್ಯ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ರಾಷ್ಟ್ರವೆಂದು ತೋರಿಸೋಣ ಎಂದು ಯಡಿಯೂರಪ್ಪ ಶುಭ ಹಾರೈಸಿದ್ದಾರೆ.