ಮೈಸೂರು: ಭಾಷಣದುದ್ದಕ್ಕೂ ಜಿ.ಟಿ.ದೇವೇಗೌಡ ಸಾಹೇಬರು ಎಂದ ಸಂಸದ ಪ್ರತಾಪ್ ಸಿಂಹ

Update: 2019-06-07 16:48 GMT

ಮೈಸೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಮ್ಮ ಭಾಷಣದುದ್ದಕ್ಕೂ ಜಿ.ಟಿ.ದೇವೇಗೌಡ ಸಾಹೇಬರು ಎಂದು ಸಂಭೋದಿಸುವ ಮೂಲಕ ಸಚಿವ ಜಿ.ಟಿ.ದೇವೇಗೌಡರಿಗೆ ಕೃತಜ್ಞತೆಯಿಂದ ನಡೆದುಕೊಂಡರು.

ಪ್ರಾದೇಶಿಕ ಯೋಜನೆ ಉಡಾನ್-3 ಅಡಿಯಲ್ಲಿ ಶುಕ್ರವಾರ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮೈಸೂರು-ಬೆಂಗಳೂರು ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿದ ನಂತರ ತಮ್ಮ ಭಾಷಣ ಆರಂಭಿಸಿದ ಅವರು, ಸಚಿವ ಜಿ.ಟಿ.ದೇವೇಗೌಡ ಸಾಹೇಬರು ಎಂದು ಕರೆದರು. ನಂತರ ತಮ್ಮ ಭಾಷಣದುದ್ದಕ್ಕೂ ಜಿ.ಟಿ.ದೇವೇಗೌಡರನ್ನು ಮಾತ್ರ ಸಾಹೇಬರು, ಸಾಹೇಬರು ಎಂದೇ ಕರೆದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆಯಲ್ಲೂ ಜಿ.ಟಿ.ದೇವೇಗೌಡ ಸಾಹೇಬರು ಎಂದೇ ಹೇಳಿದರು. ಇದೇ ವೇಳೆ ಪ್ರವಾಸೋಧ್ಯಮ ಸಚಿವ ಸಾ.ರಾ.ಮಹೇಶ್, ಶಾಸಕ ಎಸ್.ಎ.ರಾಮದಾಸ್ ಸಹ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News