ಸುಂಟಿಕೊಪ್ಪ: ಕುಸಿಯುವ ಹಂತದಲ್ಲಿ ಸೇತುವೆ; ದುರಸ್ತಿ ಕಾಮಗಾರಿಗೆ ಗ್ರಾಮಸ್ಥರ ಆಗ್ರಹ

Update: 2019-06-08 17:11 GMT

ಸುಂಟಿಕೊಪ್ಪ,ಜೂ.8: ಐಗೂರು ಗ್ರಾಮ ಪಂಚಾಯತ್ ನ ರಾಜ್ಯ ಹೆದ್ದಾರಿಯ ಐಗೂರಿನಿಂದ ಯಡವಾರೆ, ಕಾಜೂರು, ಯಡವಾನಾಡು ಗ್ರಾಮದ ಸಂಪರ್ಕ ಕಲ್ಪಿಸುತ್ತಿರುವ ಪಾಷಾಣ ಮೂರ್ತಿ ದೇವಾಲಯದ ಮೂಲಕ ಹಾದು ಹೋಗುವ ಸೇತುವೆ ಕುಸಿಯುವ ಹಂತದಲ್ಲಿದೆ.

ಈಗಾಗಲೇ ಈ ಸೇತುವೆಯ ಮುಖ್ಯ ಪಿಲ್ಲರ್ ಬಿರುಕು ಬಿಟ್ಟಿದ್ದು ಕಾಂಕ್ರಿಟ್ ಒಂದೊಂದಾಗಿ ಕಳಚಿ ಹೊಳೆಗೆ ಬೀಳುತ್ತಿದೆ. ಅಪಾಯದ ಸ್ಥಿತಿಯಲ್ಲಿರುವ ಈ ಸೇತುವೆಯನ್ನು ದುರಸ್ತಿಪಡಿಸದ್ದಿದಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿಯಾಗಲಿದೆ. ಈ ಮಳೆಗಾಲದಲ್ಲಿ ಸೇತುವೆ ಕುಸಿದು ಬಿದ್ದರೂ ಅಚ್ಚರಿ ಇಲ್ಲ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸೇತುವೆ ದುರಸ್ತಿ ಕಾಮಗಾರಿಗೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News