ನಿಲ್ಲದ ವಿಕೃತಿ: 'ಸಿದ್ದರಾಮಯ್ಯ ಸತ್ತರೆ ದೀಪಾವಳಿ ಆಚರಿಸಿ' ಎಂದ ಕಿಡಿಗೇಡಿ
Update: 2019-06-11 14:55 GMT
ಬೆಂಗಳೂರು, ಜೂ.11: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡರ ಸಾವಿನಲ್ಲೂ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಅಭಿಪ್ರಾಯಗಳನ್ನು ಹಂಚಿ ವಿಕೃತಿ ಮುಂದುವರೆಸಿದ್ದಲ್ಲದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸತ್ತರೆ, ದೀಪಾವಳಿ ಆಚರಿಸಿ ಎಂದು ಕಿಡಿಗೇಡಿಯೋರ್ವ ಸಂದೇಶ ಹರಡಿದ್ದಾನೆ.
ಮಂಗಳವಾರ ನಿರಂಜನ್ ಗೌಡ ಹಿಂದು ಎಂಬ ಹೆಸರಿನಿಂದ ಫೇಸ್ಬುಕ್ನಲ್ಲಿ, ‘ಗಿರೀಶ್ ಕಾರ್ನಾಡ್ ಸತ್ತಿದ್ದಕ್ಕೆ ಇಷ್ಟೊಂದು ಸಂಭ್ರಮಿಸುವ ನಾವು, ಸಿದ್ದರಾಮಯ್ಯ ಏನಾದರೂ ಸತ್ತರೆ ದೀಪಾವಳಿ ಹಬ್ಬ ಆಚರಿಸೋಣ ಗೆಳೆಯರೆ’ ಎಂಬ ಸಂದೇಶ ಉಲ್ಲೇಖಿಸಿದ್ದು ಈಗ ವೈರಲ್ ಆಗಿದೆ. ಇದಕ್ಕೆ ಹಲವರು ವಿರೋಧವು ವ್ಯಕ್ತಪಡಿಸಿದ್ದು, ಕಿಡಿಗೇಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.