ಮರದಿಂದ ಬಿದ್ದು ಯುವಕ ಮೃತ್ಯು

Update: 2019-06-13 14:29 GMT

ಮಂಡ್ಯ, ಜೂ.13: ಮರದಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕು ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮರಿದೇವರು(26) ಮೃತಪಟ್ಟವ. ಈತ ಮೇಕೆಗೆ ಮೇವು ಕತ್ತರಿಸಲು ಮರ ಹತ್ತಿದ್ದಾಗ ಅಯತಪ್ಪಿ ಬಿದ್ದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News