ಬೆತ್ತಲೆ ಮೆರವಣಿಗೆ ಪ್ರಕರಣ: ಸಂತ್ರಸ್ತನನ್ನು ಭೇಟಿಯಾಗಿ ಮಾಹಿತಿ ಪಡೆದ ರಾಷ್ಟ್ರೀಯ ಎಸ್ಸಿ ಆಯೋಗದ ಅಧ್ಯಕ್ಷ

Update: 2019-06-17 16:51 GMT

ಮೈಸೂರು,ಜೂ.17: ಗುಂಡ್ಲುಪೇಟೆಯ ಕೆಬ್ಬೆಕಟ್ಟೆಯಲ್ಲಿ ದಲಿತ ಯುವಕನನ್ನು ಬೆತ್ತಲೆ ಮೆರವಣಿಗೆ ಮಾಡಿ ಹಲ್ಲೆ ನಡೆಸಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಪ್ರತಾಪ್ ಅನ್ನು ರಾಷ್ಟ್ರೀಯ ಪರಿಶಿಷ್ಠ ಆಯೋಗದ ಅಧ್ಯಕ್ಷ ಮುರುಗನ್ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಘಟನೆ ಮಾಹಿತಿ ಪಡೆದರು.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಾಪ್ ನನ್ನು ಅಧಿಕಾರಿಗಳೊಂದಿಗೆ ಆಗಮಿಸಿ ಭೇಟಿ ಮಾಡಿದ ಮುರುಗನ್, ಯುವಕ ಮತ್ತು ಆತನ ಕುಟುಂಬದವರಿಗೆ ಧೈರ್ಯ ತುಂಬಿದರು. ನಂತರ ಪೊಲೀಸರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇದೇ ವೇಳೆ ಚಾಮರಾಜನಗರ ಅಡಿಷನ್ ಎಸ್ಪಿ ಅನಿತಾ, ಅಪರ ಜಿಲ್ಲಾಧಿಕಾರಿ ಆನಂದ್ ಜೊತೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News