ಜಾನಪದ ಸಾಹಿತಿ ಪುರುಷೋತ್ತಮ ಗಲಗಲಿ ನಿಧನ

Update: 2019-06-18 16:12 GMT

ವಿಜಯಪುರ, ಜೂ.18: ತಾಲೂಕಿನ ಹಲಸಂಗಿ ಗ್ರಾಮದ ಜಾನಪದ ಸಾಹಿತ್ಯ ಕ್ಷೇತ್ರದ ದಿಗ್ಗಜ ದಿ.ಮಧುರಚೆನ್ನರ ಹಿರಿಯ ಮಗ ಪುರುಷೋತ್ತಮ ಗಲಗಲಿ(91) ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಪುರುಷೋತ್ತಮ ಗಲಗಲಿ ಅರವಿಂದೋ ಆಶ್ರಮದ ಹಿರಿಯ ಸಾಧಕರು. ಅಖಿಲ ಭಾರತ ಪತ್ರಿಕೆಯ ಕನ್ನಡ ಅನುವಾದಕ ಮತ್ತು ಪತ್ರಿಕೆಯ ಪರಿಶೀಲನಾ ಸಮಿತಿಯ ಸದಸ್ಯರಾಗಿ ಸಕ್ರಿಯರಾಗಿದ್ದರು. ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯರಾಗಿದ್ದರು. ಇವರು ಮೂರು ಮಂದಿ ಪುತ್ರರು, ಪುತ್ರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News