ವಿದ್ಯುತ್ ಸ್ಪರ್ಶಿಸಿ ಪತ್ರಿಕಾ ವರದಿಗಾರ ಸಾವು

Update: 2019-06-19 17:10 GMT

ದಾವಣಗೆರೆ, ಜೂ.19: ವಿದ್ಯುತ್ ಸ್ಪರ್ಶಗೊಂಡು ಉದಯವಾಣಿ ಪತ್ರಿಕೆಯ ವರದಿಗಾರ ವಿಜಯ ಕೆಂಗಲಹಳ್ಳಿ ಬುಧವಾರ ಮೃತಪಟ್ಟಿದ್ದಾರೆ.

ದಾವಣಗೆರೆ ತಾಲೂಕಿನ ಕೆಂಗಲಹಳ್ಳಿ ಗ್ರಾಮದಲ್ಲಿ ಹೊಲಕ್ಕೆ ನೀರು ಹಾಯಿಸುವ ಸಂದರ್ಭದಲ್ಲಿ ವಿಜಯ ಅವರಿಗರ ವಿದ್ಯುತ್ ತಗಲಿದೆ. ಕೂಡಲೇ ಅವರನ್ನು ಅಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News