ಸಚಿವ ಸ್ಥಾನ ಬೇಕು ಎಂದು ಎಚ್.ವಿಶ್ವನಾಥ್ ಕೇಳಿಲ್ಲ: ಸಚಿವ ಸಾ.ರಾ.ಮಹೇಶ್

Update: 2019-06-20 17:37 GMT

ಮೈಸೂರು,ಜೂ.20: ಶಾಸಕ ಎಚ್.ವಿಶ್ವನಾಥ್ ಅನಾರೋಗ್ಯದ ಸಮಸ್ಯೆಯಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅವರು ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ ಎಂದು ಪ್ರವಾಸೋಧ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಹಿರಿಯರು ಅವರ ಮಾರ್ಗದರ್ಶನ ನಮಗೆಲ್ಲಾ ಅಗತ್ಯವಿದೆ. ಅವರು ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ ಎಂದರು.

ಅನಾರೋಗ್ಯದ ದೃಷ್ಟಿಯಿಂದ ರಾಜ್ಯಾಧ್ಯಕ್ಷ ಸ್ಥಾನ ಬೇಡ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಶಿಕ್ಷಣ ಹಾಗೂ ಇತರ ಎಲ್ಲಾ ವಿಚಾರಗಳಲ್ಲೂ ಕುಮಾರಸ್ವಾಮಿ ಸೇರಿದಂತೆ ನಾವೆಲ್ಲರೂ ಅವರ ಸಲಹೆಯನ್ನು ಪಡೆಯುತ್ತೇವೆ. ಯಾಕೆಂದರೆ ಶಿಕ್ಷಣ ಹಾಗೂ ಅರಣ್ಯ ಸಚಿವರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ ಎಂದರು.

ವಿಶ್ವನಾಥ್ ಬಿಜೆಪಿಗೆ ಹೋಗುವುದಿಲ್ಲ. ಸಂಸದ ವಿ.ಶ್ರೀನಿವಾಸಪ್ರಸಾದ್ ಮತ್ತು ಅವರು ಹಿಂದಿನಿಂದಲೂ ಸ್ನೇಹಿತರೂ ಹಾಗಾಗಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News