ಫೇಸ್ಬುಕ್ನಲ್ಲಿ ಸುಮಲತಾರ ನಿಂದನೆ ಆರೋಪ: ಎಸ್ಪಿಗೆ ದೂರು
Update: 2019-06-20 18:04 GMT
ಮಂಡ್ಯ, ಜೂ.20: ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಸಂಸದೆ ಸುಮಲತಾ ಅಂಬರೀಷ್ ಹಾಗೂ ಒಕ್ಕಲಿಗ ಮತದಾರರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆನ್ನಲಾದ ವ್ಯಕ್ತಿಯ ವಿರುದ್ಧ ಸುಮಲತಾ ಬೆಂಬಲಿಗರು ದೂರು ನೀಡಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದ ಮಾಯಿಗೌಡ ಅಲಿಯಾಸ್ ಗೋವಿಂದ ಎಂಬ ವ್ಯಕ್ತಿ ಶ್ರೀಕಾಂತ್ ಕೆ.ಸಿ. ಫೇಸ್ಬುಕ್ ಖಾತೆಯಲ್ಲಿ ನಿಂದನೆ ಮಾಡಿದ್ದು, ವೀಡಿಯೋ ವೈರಲ್ ಆಗಿದೆ.
ಸಂಸದೆ ಸುಮಲತಾ, ನಟರಾದ ದರ್ಶನ್, ಯಶ್, ಸುಮಲತಾ ಪರ ಮತ ನೀಡಿದ ಮಂಡ್ಯ ಒಕ್ಕಲಿಗ ಸಮುದಾಯದವರನ್ನು ಅಶ್ಲೀಲ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಕ್ರಮ ಜರುಗಿಸಬೇಕು ಎಂದು ಎಸ್ಪಿ ಅವರಿಗೆ ದೂರು ನೀಡಲಾಗಿದೆ.