ಕಾರು ಅಪಘಾತ: ಪತ್ರಕರ್ತ ಸೇರಿ ಮೂವರಿಗೆ ಗಂಭೀರ ಗಾಯ

Update: 2019-06-21 17:26 GMT

ಮೈಸೂರು,ಜೂ.21: ಕಾರು ಅಪಘಾತದಲ್ಲಿ ಪ್ರಜಾವಾಣಿ ಮೈಸೂರು ಬ್ಯೂರೊ ವರದಿಗಾರ ನೇಸರ ಕಾಡನಕುಪ್ಪೆ ಮತ್ತು ಅವರ ಪತ್ನಿ, ಪುತ್ರನಿಗೆ ಗಂಭೀರವಾಗಿ ಗಾಯಗಳಾದ ಘಟನೆ ನಡೆದಿದೆ.

ಅಪಘಾತದಲ್ಲಿ ನೇಸರ ಅವರ ಎಡಗಾಲು ಹಾಗೂ ಎದೆ ಭಾಗಕ್ಕೆ ಪೆಟ್ಟಾಗಿದ್ದು, ಪತ್ನಿ ಮೇಘನಾ ಅವರಿಗೆ ತಲೆ, ಎಡಕಾಲು ಹಾಗೂ ಸೊಂಟ ಹಾಗೂ ಮಗುವಿನ ಎಡಕೈಗೆ ಬಲವಾದ ಗಾಯವಾಗಿದೆ. 

ಮೂವರನ್ನೂ ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News