ಹಿರಿಯ ಸಾಹಿತಿ ಕೆಂಪಚಾರ್ ಕುಪ್ಯ ನಿಧನ

Update: 2019-06-21 17:28 GMT

ಮೈಸೂರು,ಜೂ.21: ಮೈಸೂರಿನ ಶಾರದಾದೇವಿ ನಗರದ ನಿವಾಸಿಯಾದ ಹಿರಿಯ ಸಾಹಿತಿ ಕೆಂಪಚಾರ್ ಕುಪ್ಯ (73)ಅವರು ವಯೋ ಸಹಜ ಖಾಯಿಲೆಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಕೊನೆಯುಸಿರೆಳೆದರು.

ಮೃತರು ಟಿ.ನರಸಿಪುರ ತಾಲೂಕು ಕುಪ್ಯ ಗ್ರಾಮದವರು. ಇವರು ಕನ್ನಡದಲ್ಲಿ ಅನೇಕ ಮೌಲ್ಯಯುತ ಕೃತಿಗಳನ್ನು ರಚಿಸಿದ್ದಾರೆ. ಮೃತರು ಪತ್ನಿ ಮೀನಾಕ್ಷಿ, ಮಗ ಸಾಹಿತಿ ಚಂದ್ರಕಾಂತ್ ಸೇರಿದಂತೆ ಅನೇಕ ಬಂಧು ಮಿತ್ರರನ್ನು ಅಗಲಿದ್ದಾರೆ. ಅವರು ಸಾಹಿತ್ಯ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಪ್ರೋ.ನೀ.ಗಿರಿಗೌಡ, ಪ್ರೋ.ಮಳಲಿ ವಸಂತಕುಮಾರ್, ಜ್ಞಾನಬುತ್ತಿಯ ಜೈನಹಳ್ಳಿ ಸತ್ಯನಾರಾಯಣಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯ ಜೆ.ಎಸ್.ಜಗದೀಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಚಂದ್ರಶೇಖರ್, ಮಡ್ಡಿಕೆರೆ ಗೋಪಾಲ್ ಮತ್ತಿತರರು ಅಂತಿಮ ದರ್ಶನ ಪಡೆದರು. ಮೃತರ ಅಂತ್ಯಕ್ರಿಯೆಯು ಇಂದು ಟಿ.ನರಸೀಪುರ ತಾಲೂಕು ಕುಪ್ಯ ಗ್ರಾಮದಲ್ಲಿ ನೆರವೇರಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News