ಮೈಸೂರು: ಕೇಂದ್ರ ಕಾರಾಗೃಹದಲ್ಲಿ ಅನಾರೋಗ್ಯದಿಂದ ಖೈದಿ ಸಾವು

Update: 2019-06-22 16:21 GMT

ಮೈಸೂರು,ಜೂ.22: ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಖೈದಿಯೊಬ್ಬ ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

ಮೈಸೂರಿನ ಕೇಂದ್ರ ಕಾರಾಗೃಹದ ವಿಶ್ವನಾಥ್ (40) ಸಾವನ್ನಪ್ಪಿದ ಖೈದಿ. ವಿಶ್ವನಾಥ್ ಮೈಸೂರಿನ ಶ್ರೀರಾಂಪುರ ನಿವಾಸಿಯಾಗಿದ್ದು, ಚೆಕ್ ಬೌನ್ಸ್ ಕೇಸ್ ಸಾಬೀತಾದ ಹಿನ್ನೆಲೆ ಕಾರಾಗೃಹದಲ್ಲಿದ್ದರು. ಕಳೆದ ಎರಡು ವರ್ಷಗಳಿಂದ ಕೇಂದ್ರ ಕಾರಾಗೃಹದ ಖೈದಿಯಾಗಿದ್ದ ವಿಶ್ವನಾಥ್ ಗೆ ಅನಾರೋಗ್ಯವಿತ್ತು. ಈ ಹಿನ್ನೆಲೆಯಲ್ಲಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿಶ್ವನಾಥ್ ಇಂದು ಸಾವನ್ನಪ್ಪಿದ್ದು, ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News