ವಡ್ಡಗೆರೆ ಕೆರೆಗೆ ನೀರು: ಸಂಭ್ರಮಾಚರಣೆ ನಡೆಸಿದ ರೈತರು

Update: 2019-06-23 17:47 GMT

ಚಾಮರಾಜನಗರ, ಜೂ.23: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಜೂ.18ರಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಫಲ ಸಿಕ್ಕಿದ್ದು, ಇಂದು ವಡ್ಡಗೆರೆ ಕೆರೆಗೆ ನೀರು ಬಿಡಲಾಗಿದೆ. ಇದೇ ಖುಷಿಯಲ್ಲಿ ರೈತರು ಹರಿದು ಬರುತ್ತಿದ್ದ ನೀರಿಗಿಳಿದು ಸಂಭ್ರಮಾಚರಣೆ ನಡೆಸಿದರು.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಕಾರ್ಯದರ್ಶಿ ಡಾ.ಗುರುಪ್ರಸಾದ್, ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ಮುಖಂಡ ಕಡಬೂರು ಮಂಜುನಾಥ್ ಹಾಗೂ ಇತರರು ಪೈಪ್ ಲೈನಿಂದ ಕೆರೆಗೆ ಹರಿದುಬರುತ್ತಿರುವ ನೀರಿನಲ್ಲಿ ಇಳಿದು ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News