ಕಾಂಗ್ರೆಸ್ ನನ್ನ ಬಾಯಿಗೆ ಬೀಗ ಹಾಕಿದೆ: ಸಚಿವ ಡಿಕೆಶಿ

Update: 2019-06-24 14:14 GMT

ಮಂಡ್ಯ, ಜೂ.24: ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಏನೂ ಪ್ರತಿಕ್ರಿಯಿಸುವುದಿಲ್ಲ. ಕಾಂಗ್ರೆಸ್ ನನ್ನ ಬಾಯಿಗೆ ಬೀಗ ಹಾಕಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸೋಮವಾರ ಮದ್ದೂರಿನ ಸೋಮನಹಳ್ಳಿಗೆ ಆಗಮಿಸಿದ ಅವರು, ಇತ್ತೀಚೆಗೆ ನಿಧನರಾದ ಎಸ್.ಎಂ.ಶಂಕರ್ ಕುಟುಂಬಕ್ಕೆ ಸಾಂತ್ವನ ಹೇಳಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ಅವರನ್ನೇ ಕೇಳಿ ಎಂದ ಅವರು, ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಆಗಿಲ್ಲವೆಂಬ ಆರೋಪದ ಬಗ್ಗೆ ಗಮನ ಸೆಳೆದಾಗ ನನ್ನ ಕ್ಷೇತ್ರದಲ್ಲಿ ಎಲ್ಲಾ ಪಕ್ಷದವರೂ ವೋಟ್ ಹಾಕಿದ್ದಾರೆ. ಮೈತ್ರಿ ಧರ್ಮ ಪಾಲನೆಯಾಗಿದೆ. ಇತರ ಕ್ಷೇತ್ರಗಳ ಬಗ್ಗೆ ಗೊತ್ತಿಲ್ಲ. ಪಕ್ಷದಲ್ಲಿ ನಾನಿನ್ನೂ ಹುಡುಗ ಎಂದು ಹೇಳಿದರು.

ಮನ್ಸೂರ್ ಖಾನ್ ಯಾರು ಅಂತ ನನಗೆ ಗೊತ್ತಿಲ್ಲ. ನನಗೆ ಗೊತ್ತಿರೋದು ಮನ್ಸೂರ್ ರೆಹಮಾನ್ ಖಾನ್ ಮಗ. ಅವನು ನನ್ನ ಫ್ರೆಂಡ್ ಎಂದು ಐಎಂಎ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಶ್ರೀರಾಮುಲು ಟೀಕೆಗೆ ಮುಂದೆ ಉತ್ತರ ಕೊಡುತ್ತೇವೆ ಎಂದರು.

ನಾಲೆಗಳಿಗೆ ನೀರು ಬಿಡುವಂತೆ ಪ್ರತಿಭಟನೆ ಮಾಡುತ್ತಿರುವ ರೈತರು ನನ್ನನ್ನೂ ಅಡ್ಡಹಾಕಿದ್ದರು. ಆದರೆ, ನೀರು ಬಿಡುಗಡೆ ವಿಷಯ ಕಾವೇರಿ ನೀರು ನಿರ್ವಹಣಾ ಸಮಿತಿಗೆ ಸೇರಿದೆ. ಈ ಬಗ್ಗೆ ರೈತರಿಗೆ ಮನವರಿಕೆ ಮಾಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News