ಯುವಕನಿಂದ ಕಿರುಕುಳ ಆರೋಪ: ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವತಿ
Update: 2019-06-24 15:49 GMT
ಮಡಿಕೇರಿ, ಜೂ.24 : ಯುವಕನೊಬ್ಬ ಕಿರುಕುಳ ನೀಡುತ್ತಿದ್ದಾನೆ ಎಂದು ಡೆತ್ ನೋಟ್ ಬರೆದಿಟ್ಟು ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.
ಡೈರಿ ಫಾರಂ ಬಳಿಯ ನಿವಾಸಿ ಹರೀಶ್ ಹಾಗೂ ರಾಣಿ ದಂಪತಿಗಳ ಪುತ್ರಿ ದಿವ್ಯಜ್ಯೋತಿ (22) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಯುವತಿ.
ತಂದೆ, ತಾಯಿಗೆ ತಿಳಿಸದೆ ದಿವ್ಯಜ್ಯೋತಿ ತಾನು ಪ್ರೀತಿಸುತ್ತಿದ್ದ ಬ್ರಿಜೇಶ್ ಎಂಬಾತನನ್ನು ರಿಜಿಸ್ಟರ್ ವಿವಾಹವಾಗಿದ್ದಳು ಎನ್ನಲಾಗಿದೆ. ಆದರೆ, ಈ ಹಿಂದೆ ಪ್ರೀತಿಸುತ್ತಿದ್ದ ಪವನ್ ಎಂಬಾತ ಇದೇ ಕಾರಣಕ್ಕೆ ದಿವ್ಯಜ್ಯೋತಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಯುವತಿ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ನೋಟ್ನಲ್ಲಿ ಪವನ್ ಕಿರುಕುಳ ನೀಡುತ್ತಿದ್ದ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಪೊಲೀಸರು ಪವನ್ ಹಾಗೂ ರಿಜಿಸ್ಟರ್ ವಿವಾಹವಾಗಿರುವ ಬ್ರಿಜೇಶ್ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.