ಮತ್ತೆ ವಕೀಲಿಕೆ ಆರಂಭಿಸಿದ ಎಂ.ವೀರಪ್ಪ ಮೊಯ್ಲಿ
Update: 2019-06-24 16:41 GMT
ಬೆಂಗಳೂರು, ಜೂ.24: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋತ ನಂತರ ಕೇಂದ್ರ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ಅವರು ಮತ್ತೆ ವಕೀಲಿಕೆ ಆರಂಭಿಸಿದ್ದಾರೆ.
ವೀರಪ್ಪ ಮೊಯ್ಲಿ ಅವರು ಈ ಹಿಂದೆ 2004ರಲ್ಲಿ ಹೈಕೋರ್ಟ್ನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಕಾಲತ್ತು ವಹಿಸಿದ್ದರು. ಸೋಮವಾರ ಮತ್ತೆ 15 ವರ್ಷಗಳ ಬಳಿಕ ವಕೀಲರ ಕೋರ್ಟ್ ಧರಿಸಿ, ಪ್ರಕರಣವೊಂದರ ಪರವಾಗಿ ವಕಾಲತ್ತು ವಹಿಸಿಲು ಹೈಕೋರ್ಟ್ಗೆ ಆಗಮಿಸಿದ್ದರು.