ಮತ್ತೆ ವಕೀಲಿಕೆ ಆರಂಭಿಸಿದ ಎಂ.ವೀರಪ್ಪ ಮೊಯ್ಲಿ

Update: 2019-06-24 16:41 GMT

ಬೆಂಗಳೂರು, ಜೂ.24: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋತ ನಂತರ ಕೇಂದ್ರ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ಅವರು ಮತ್ತೆ ವಕೀಲಿಕೆ ಆರಂಭಿಸಿದ್ದಾರೆ.

ವೀರಪ್ಪ ಮೊಯ್ಲಿ ಅವರು ಈ ಹಿಂದೆ 2004ರಲ್ಲಿ ಹೈಕೋರ್ಟ್‌ನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಕಾಲತ್ತು ವಹಿಸಿದ್ದರು. ಸೋಮವಾರ ಮತ್ತೆ 15 ವರ್ಷಗಳ ಬಳಿಕ ವಕೀಲರ ಕೋರ್ಟ್ ಧರಿಸಿ, ಪ್ರಕರಣವೊಂದರ ಪರವಾಗಿ ವಕಾಲತ್ತು ವಹಿಸಿಲು ಹೈಕೋರ್ಟ್‌ಗೆ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News