ಕಾರ್ಮಿಕ ಮಹಿಳೆಯರ ಮೇಲೆ ಕಾಡಾನೆ ದಾಳಿ

Update: 2019-06-26 16:18 GMT

ಮಡಿಕೇರಿ, ಜೂ.26: ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆಯರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ವಿರಾಜಪೇಟೆ ಸಮೀಪದ ಅಮ್ಮತ್ತಿ ಒಂಟಿಯಂಗಡಿಯಲ್ಲಿ ನಡೆದಿದೆ.

ಒಂಟಿಯಂಗಡಿ ಚಾಮುಂಡಿ ಪೈಸಾರಿಯ ಕಾರ್ಮಿಕ ಮಹಿಳೆ ಅಮ್ಮಾಲು ಬಾಲಕೃಷ್ಣ ಮತ್ತು ಕಮಲಾ ಮಣಿ ಎಂಬುವವರೇ ಗಾಯಗೊಂಡವರಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಎದುರಾದ ಆನೆ ಈ ಇಬ್ಬರು ಕಾರ್ಮಿಕ ಮಹಿಳೆಯರಿಗೆ ಸೊಂಡಿಲಿನಿಂದ ಗುದ್ದಿ ಪರಾರಿಯಾಗಿದೆ.  ಗಾಯಾಳುಗಳನ್ನು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯಾಧಿಕಾರಿ ಗೊಪಾಲ್ ಹಾಗೂ ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಳುಗಳ ಯೋಗಕ್ಷೇಮ ವಿಚಾರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News