ನಾನು ಅತೃಪ್ತ ಶಾಸಕನಲ್ಲ, ಪಕ್ಷ ತೊರೆಯುವುದಿಲ್ಲ: ಶಾಸಕ ತನ್ವೀರ್ ಸೇಠ್ ಸ್ಪಷ್ಟನೆ

Update: 2019-07-02 18:21 GMT

ಮೈಸೂರು,ಜು.2: ನಾನು ಅತೃಪ್ತ ಶಾಸಕನಲ್ಲ. ನನಗೆ ಕಾಂಗ್ರೆಸ್ ಪಕ್ಷದ ನಡೆಯಿಂದ ಅಸಮಾಧಾನ ಇದೆ. ಆದರೆ ಪಕ್ಷ ತೊರೆಯುವ ಯೋಚನೆ ಬಂದಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಮಾರಾಟದ ವಸ್ತು ಆಲ್ಲ. ನನ್ನ ಶಾಸಕ ಸ್ಥಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಬ್ಬರು ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಇಬ್ಬರು ರಾಜೀನಾಮೆ ನೀಡಿದರೂ ಮೈತ್ರಿ ಸರ್ಕಾರಕ್ಕೆ ತೊಂದರೆ ಇಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ  ಪಕ್ಷಾಂತರ ಕಾಯ್ದೆ ತರಬೇಕು. ಸೂಕ್ತ ಕಾನೂನು ಜಾರಿ ಮಾಡಿ ಇದಕ್ಕೆ ಕಡಿವಾಣ ಹಾಕಬೇಕು.  ಈ ಬೆಳವಣಿಗಳನ್ನು ಪಕ್ಷದ ನಾಯಕರು ಗಮನಿಸಬೇಕು. ವಲಸಿಗರಿಂದ ಕಾಂಗ್ರೆಸ್ ಪಕ್ಷ ಈ ಸ್ಥಿತಿಗೆ ಬಂದಿದೆ. ಕಾಂಗ್ರೆಸ್ ಪಕ್ಷದ ಉಳಿವಿಗೆ ಹಿರಿಯ ನಾಯಕರು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News