ಶೌಚಾಲಯ ಸ್ವಚ್ಛತೆ ಕಾಪಾಡದ ಇಂಜಿನಿಯರ್ ಅಮಾನತಿಗೆ ಸಚಿವ ಜಿ.ಟಿ.ದೇವೇಗೌಡ ಸೂಚನೆ

Update: 2019-07-03 16:45 GMT

ಮೈಸೂರು,ಜು.3: ಶೌಚಾಲಯದ ಸ್ವಚ್ಛತೆ ಕಾಪಾಡದ ಹಿನ್ನೆಲೆ ಇಂಜಿನಿಯರ್ ಹಾಗೂ ಟೆಂಡರ್ ದಾರರ ವಿರುದ್ಧ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಗರಂ ಆಗಿದ್ದು, ಇಬ್ಬರನ್ನೂ ಸಸ್ಪೆಂಡ್  ಮಾಡುವಂತೆ ಸ್ಥಳದಲ್ಲೇ ಖಡಕ್ ಆದೇಶ ಹೊರಡಿಸಿದರು.

ಮೈಸೂರಿನ ಸಬರ್ಬ್ ಬಸ್ ನಿಲ್ದಾಣದ ಮುಂಭಾಗವಿರುವ ಶೌಚಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಅವರಿಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗಬ್ಬುನಾರುತ್ತಿದ್ದ ಶೌಚಾಲಯ ಕಂಡು ಫುಲ್ ಗರಂ ಆದ ಸಚಿವ ಜಿ.ಟಿ ದೇವೇಗೌಡ ಅವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಹಾಗೆಯೇ ಇಂಜಿನಿಯರ್, ಟೆಂಡರ್ ದಾರ ಯಾರು ಎಂದು ಪ್ರಶ್ನಿಸಿದರಲ್ಲದೇ, ಜಿಲ್ಲಾಧಿಕಾರಿಗೆ ಇಂಜಿನಿಯರ್, ಟೆಂಡರ್ ಇಬ್ಬರನ್ನೂ ಸಸ್ಪೆಂಡ್ ಮಾಡಿ ಎಂದು ಸ್ಥಳದಲ್ಲೇ ಖಡಕ್ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News