ಬೈಕ್ ಗಳು ಮುಖಾಮುಖಿ ಢಿಕ್ಕಿ: ಓರ್ವ ಮೃತ್ಯು

Update: 2019-07-06 17:16 GMT

ಮಂಡ್ಯ, ಜು.6: ಎರಡು ಬೈಕುಗಳು ಮುಖಾಮುಖಿ ಢಿಕ್ಕಿಯಾಗಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಮುರಕನಹಳ್ಳಿ ಬಳಿ ಕಾಲುವೆ ಏರಿ ಮೇಲೆ ಶನಿವಾರ ನಡೆದಿದೆ.

ಮೊಸಳೆಕೊಪ್ಪಲು ಗ್ರಾಮದ ರಂಗೇಗೌಡರ ಪುತ್ರ ಎಂ.ಆರ್.ಮಹೇಂದ್ರ(35) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News