ಸಂವಿಧಾನದ ದೇಗುಲವನ್ನು ಬಿಜೆಪಿ ಹಾಳು ಮಾಡುತ್ತಿದೆ: ಮಾಜಿ ಸಚಿವ ಎಚ್.ಕೆ.ಪಾಟೀಲ್

Update: 2019-07-09 15:11 GMT

ಬೆಂಗಳೂರು, ಜು. 9: ಬಿಜೆಪಿ ಪವಿತ್ರ ದೇಗುಲಗಳನ್ನು ಹಾಳು ಮಾಡುತ್ತಿದ್ದು, ಇದೀಗ ವಿಧಾನಸೌಧ ಎನ್ನುವ ಸಂವಿಧಾನದ ದೇವಾಲಯವನ್ನೂ ಹಾಳು ಮಾಡಲು ಹೊರಟಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ದೇಶದ ಹಲವು ಪವಿತ್ರ ದೇವಾಯಲಗಳನ್ನು ಹಾಳು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲಬೇಕು. ಇದೀಗ ಶಾಸಕರನ್ನು ರಾಜೀನಾಮೆ ಕೊಡಿಸುವ ಮೂಲಕ ವಿಧಾನಸೌಧ ಎಂಬ ಸಂವಿಧಾನದ ದೇಗುಲವನ್ನು ಬಿಜೆಪಿ ಹಾಳು ಮಾಡಲು ಹೊರಟಿದೆ ಎಂದು ದೂರಿದರು.

ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಸಂಖ್ಯಾಬಲವಿದೆ. ಅಲ್ಪಮತಕ್ಕೆ ಕುಸಿದಿಲ್ಲ. ಸಂಖ್ಯಾಬಲದ ಆಧಾರದಲ್ಲೇ ಸರಕಾರ ಉಳಿಯಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾನೂನು ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News