ಸರಕಾರ ಉರುಳುವ ಭೀತಿಯ ನಡುವೆ ಸಚಿವ ರೇವಣ್ಣ ಟೆಂಪಲ್ ರನ್

Update: 2019-07-09 18:02 GMT

ಚಿಕ್ಕಮಗಳೂರು, ಜು.9: ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆಯಿಂದ ರಾಜ್ಯ ಸರಕಾರ ಉಳಿಯುತ್ತೋ ಬೀಳುತ್ತೋ ಎಂಬ ಕೂತುಹಲ ಒಂದು ಕಡೆಯಾದre ರಾಜ್ಯ ಸರಕಾರದ ಉಳಿವಿಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸರಕಾರ ಉಳಿವಿಗಾಗಿ ಟೆಂಪಲ್ ರನ್ ಮಾಡುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ಶೃಂಗೇರಿಗೆ ಆಗಮಿಸಿದ್ದ ಅವರು ತಾರಾತುರಿಯಲ್ಲಿ ಶಾರದಾಂಭೆಯ ದರ್ಶನ ಪಡೆದು ನಿರ್ಗಮಿಸಿದ್ದಾರೆ.

ಮಂಗಳವಾರ ಬೆಳಗ್ಗೆಯೇ ಶಾರದಾಂಭೆಯ ಸನ್ನಿಧಿಗೆ ಆಗಮಿಸಿದ್ದ ರೇವಣ್ಣ ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಚಿವರು ದೇವಾಲಯಕ್ಕೆ ಆಗಮಿಸಿದ್ದ ವೇಳೆ ಶೃಂಗೇರಿಯಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಸಚಿವರು ಶಾರದೆ ಸನ್ನಿಧಿಗೆ ಆಗಮಿಸಿದಾಗಲೂ ಧಾರಾಕಾರ ಮಳೆ ಬರುತ್ತಿತ್ತು. ಕೆಲಹೊತ್ತು ದೇವಾಲಯದಲ್ಲಿದ್ದು ನಂತರ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಈ ವೇಳೆ ಕೆಲ ಸುದ್ದಿ ಮಾಧ್ಯಮದವರು ಸಚಿವರನ್ನು ಮಾತನಾಡಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಸರಕಾರಕ್ಕೇನೂ ಆಗಲ್ಲ. ಮಾಧ್ಯಮದವರೊಂದಿಗೆ ಈಗೇನೂ ಮಾತಾನಾಡುವುದಿಲ್ಲ ಎನ್ನುತ್ತಾ ಸಚಿವ ರೇವಣ್ಣ ಕಾರು ಹತ್ತಿದರು.

ಶಾಸಕರ ರಾಜೀನಾಮೆಯಿಂದ ಸರಕಾರ ಉರುಳುವ ಭೀತಿ ಎದುರಾಗಿದ್ದು, ಈ ಹಿನ್ನೆಲೆಯಲ್ಲೆ ಸಚಿವ ರೇವಣ್ಣ ಶಾರದೆ ಸನ್ನಿಧಿಗೆ ಬಂದಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News