ವೈನ್‍ಸ್ಟೋರ್ ಕ್ಯಾಷಿಯರ್ ಮೇಲೆ ಹಲ್ಲೆ ನಡೆಸಿ ನಗದು ದರೋಡೆ

Update: 2019-07-10 12:07 GMT

ಶಿವಮೊಗ್ಗ, ಜು.10: ವೈನ್‍ಸ್ಟೋರ್ ಕ್ಯಾಷಿಯರನ್ನು ಅಡ್ಡಗಟ್ಟಿದ್ದ ಮೂವರು ಮುಸುಕುಧಾರಿಗಳು ದೊಣ್ಣೆಯಿಂದ ಹಲ್ಲೆ ನಡೆಸಿ, ಅವರ ಬಳಿಯಿದ್ದ ಸಾವಿರಾರು ರೂಪಾಯಿ ಅಪಹರಿಸಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆ ಗ್ರಾಮದ ರಸ್ತೆಯಲ್ಲಿ ನಡೆದಿದೆ. 

ಭದ್ರಾವತಿ ತಾಲೂಕಿನ ಕೊಪ್ಪ ಗ್ರಾಮದ ವೆಂಕಟೇಶ್ (37) ದರೋಡೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಹೊಳೆಹೊನ್ನೂರಿನಲ್ಲಿರುವ ಲಕ್ಷ್ಮೀ ವೈನ್‍ಸ್ಟೋರ್ ನಲ್ಲಿ ಇವರು ಕ್ಯಾಷಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 

ಇವರು ವ್ಯಾಪಾರದ ಹಣದೊಂದಿಗೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಮೂವರು ಮುಸುಕುಧಾರಿಗಳು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ನಂತರ ದೊಣ್ಣೆಯಿಂದ ಇವರ ಮೇಲೆ ಹಲ್ಲೆ ನಡೆಸಿ ಅವರ ಬಳಿಯಿದ್ದ 85 ಸಾವಿರ ನಗದನ್ನು ದರೋಡೆ ನಡೆಸಿದ್ದಾರೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News